Thursday, September 24, 2009

ಪ್ರಜಾವಾಣಿಯಲ್ಲಿ ನಾನು...


ಕಲೆಗೆ ಬೆನ್ನುತಟ್ಟಿದ ‘ಬಾಷ್’



ಬಹುರಾಷ್ಟ್ರೀಯ ಕಂಪೆನಿ ಬಾಷ್ ತನ್ನ ಸಂಸ್ಥಾಪಕ ರಾಬರ್ಟ್ ಬಾಷ್ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರು ಕಲಾವಿದರಿಗೆ ಮತ್ತು 2 ಕಲಾ ಸಂಸ್ಥೆಗಳಿಗೆ ವಾರ್ಷಿಕ ಸಹಾಯಧನ ನೀಡಿ ಗೌರವ ಸಲ್ಲಿಸಿತು.


ನಗರದ ಬಹುರಾಷ್ಟ್ರೀಯ ಕಂಪೆನಿ ಬಾಷ್ ತನ್ನ ಸಂಸ್ಥಾಪಕ ರಾಬರ್ಟ್ ಬಾಷ್ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರು ಕಲಾವಿದರಿಗೆ ಮತ್ತು 2 ಕಲಾ ಸಂಸ್ಥೆಗಳಿಗೆ ವಾರ್ಷಿಕ ಸಹಾಯಧನ ನೀಡಿ ಗೌರವ ಸಲ್ಲಿಸಿತು.

ಉದಯೋನ್ಮುಖ ಕಲಾವಿದರುಹಾಗೂ ಕಲಾಸಂಸ್ಥೆಗಳಿಗೆ ಒಟ್ಟು 8.25 ಲಕ್ಷ ರೂಪಾಯಿ ಮೊತ್ತವನ್ನು ಬಾಷ್ ವ್ಯವಸ್ಥಾಪಕ ನಿರ್ದೇಶಕ ಎಫ್. ಪಿಕಾರ್ಡ್ ನೀಡಿದರು. ಕಲಾವಿದರು 10 ತಿಂಗಳು ನಡೆಸುವ ಯೋಜನೆಗಳಿಗೆ ಈ ಮೊತ್ತ ಬಳಸಬಹುದು. ನಂತರ ವಿಶೇಷ ಸಮಾರಂಭದಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.

ಛಾಯಾಗ್ರಹಣ ಮತ್ತು ವಿಡಿಯೋ ಕ್ಷೇತ್ರದಲ್ಲಿ ಸೋನಿಯಾ ಜೋಸ್, ಚಿತ್ರಕಲೆಗಾಗಿ ಎನ್. ಪರುಶುರಾಂ, ಸೈನ್‌ಬೋರ್ಡ್ ಕಲೆಗಾಗಿ ಎಸ್. ಮಂಜುನಾಥ್, ಸಾರ್ವಜನಿಕ ಕಲೆಗಾಗಿ ಎಸ್ ಗುರುರಾಜ್ ಛಾಯಾಗ್ರಹಣಕ್ಕಾಗಿ ಪತ್ರಿಕಾ ಛಾಯಾಗ್ರಾಹಕ ಸೆಲ್ವ ಕುಮಾರ್, ರಂಗಭೂಮಿಗಾಗಿ ರಾಮ್ ಗಣೇಶ್ ಅವರು ಅನುದಾನಕ್ಕೆ ಪಾತ್ರರಾದರು.



ಕಲಾಸಂಸ್ಥೆಗಳಾದ ನಂ.1 ಶಾಂತಿ ರೋಡ್ ಕಲಾಗ್ಯಾಲರಿ ಮತ್ತು ಅಟ್ಟಕಲರಿ ಕೂಡ ಬಾಷ್ ಗೌರವಕ್ಕೆ ಪಾತ್ರವಾದರು.

ಖ್ಯಾತ ಕಲಾವಿದರಾದ ಸುಮನ್ ಗೋಪಿನಾಥ್, ಸುರೇಶ್ ಜಯರಾಂ, ಸುರೇಖಾ, ಮೀನಾದೇವಿ, ಗಾಯತ್ರಿ ಕೃಷ್ಣನ್ ಹಾಗೂ ವಿವೇಕ್ ಧಾರೇಶ್ವರ್ ಕಲಾವಿದರ ಆಯ್ಕೆ ಸಮಿತಿಯಲ್ಲಿದ್ದರು.

http://www.prajavani.net/Content/Sep242009/metrothurs20090923148040.asp




Monday, September 14, 2009

ಮರೆಯಲಾಗದ ಈದಿನ

ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳವರೆಗೂ ನಾನೇನೊ ಸಾದಿಸಿದ್ದೇನೆ ಎಂಬ ಅಹಮ್ಮಿನಲ್ಲೇ ವಾಸ್ತವದ ತಳಹದಿಯ ಮೇಲೆ ನಡೆದೆ....

ಆ ಅಹಂ ನನಗೆ ತಿರಾ ತಲೆಗೆ ಹತ್ತಿಸಿಕೊಳ್ಳದಿದ್ದರು.. ನನಗೆ ಮಾತ್ರ ಏನೋ ಸಾದಿಸಿದ್ದೇನೆ ಎಂಬ ಭ್ರಮೆಯೊಳಗಿನ ವೃತ್ತದೊಳಗೆ ಓಲಾಡುವಂತೆ ಮಾಡಿತ್ತು...

ಆದರೆ....

ಆ ಹನ್ನೆರುಡು ತಿಂಗಳು ಕೆಲಸವಿಲ್ಲದೆ ಕಳೆದದ್ದು... ಈ ಅಹಂ ತಲೆಯಿಂದ ತಳಬುಡಕ್ಕೆ ಬಂದಿಳಿಯುವಂತೆ ಮಾಡಿತು... ಅಹಂ ಏನೋ ಇಳಿಯಿತು...
ಆದರೆ ಮುಂದೆ...?
ಗೊತ್ತಿಲ್ಲ...
ಇಷ್ಟು ವರ್ಷಗಳಿಂದ ಯಾರ ಮುಂದೆಯೂ ಕೈಚಾಚಿ ಕೆಲಸ ಕೇಳದವನು... ಕೇಳಿದೆ.. ಅಂಗಲಾಚಿದೆ... ಸೋಲುವ ಲಕ್ಷಣಗಳು ಕಣ್ಮುಂದೆ ಕಾಣತೊಡಗಿತು...

ಆದರೂ ಮನದ ಮೂಲೆಯಲ್ಲೆಲ್ಲೋ ಸಣ್ಣ ಆಸೆ... ಮುಂದೆ ಹಿಂದಿನ ಬ್ಯುಸಿ ದಿನಗಳನ್ನು ಪಡೆದೇ ಪಡೆಯುತ್ತೇನೆ ... ಎಂಬ ಸುಳಿವು ಕಾಣುತ್ತಲೇ ಇತ್ತು... ಅಥವ ಆ ಸುಳಿವನ್ನು ಸೃಷ್ಟಿಸಿಕೊಳ್ಳುತ್ತಲೇ ಇದ್ದೆ.....
ಆ ಸುಳಿವೇ
ರಾಬರ್ಟ್ ಬಾಷ್ ಗ್ರಾಂಟ್ ಗೆ ಅರ್ಜಿ ಹಾಕಲು ಪ್ರೇರೇಪಿಸಿತು...ಆ ಪ್ರೇರಣೆಗೆ ಹಿಂದಿನ ದಿನಗಳ ತಯಾರಿ ಜೊತೆಯಾಗಿತ್ತು.... ಗೊತ್ತಿಲ್ಲದ ದೃಡತೆ ಮನದಲ್ಲಿ ಅದಾಗಲೇ ಮೂಡಿತ್ತು... ಆ ಮೂಡಿರುವ ಮೂರ್ತತೆಯೇ ಕಲೆ ಮತ್ತು ಶ್ರೀಸಾಮಾನ್ಯನನ್ನು ಬರೆಯಲು ಪ್ರೇರೇಪಿಸಿತು....ಇದೆಲ್ಲದರ ಪ್ರಬಾವ ಇಂದು ಮೊದಲ ಹಂತ ತಲುಪಿದೆ...


ಇಂದು ನನ್ನ ತಿಳುವಿಗೆ ಮೊದಲ ಗೌರವ ಸಂದಿದೆ...
ಇಂದು ನನ್ನನ್ನು ಗುರುತಿಸಿದ್ದಾರೆ...
ಗುರುತಿಸುವ ಗುಂಪು ಸೃಷ್ಟಿಯಾಗಿದೆ...

ಇಷ್ಟು ದಿನಗಳ ಕಲಿಕೆ , ಅನುಭವಿಸಿದ ಕಷ್ಟಗಳು ಗೊಬ್ಬರವಾಗಿ ಅದರಲ್ಲಿ ಗಿಡ ಮೊಳೆಯಲು ಶುರುವಾಗಿದೆ... ಇದನ್ನು ಇಲ್ಲಿಗೆ ಮುಗಿಯಲು ಬಿಡದೆ... ಗಿಡವಾಗಿಸಿ , ಮರವಾಗಿಸಿ , ಹೆಮ್ಮರವಾಗಿಸಬೇಕಾಗಿದೆ...

ಅದು ಕಲ್ಪಿಸಿಕೊಂಡಷ್ಟು ಸುಲಬವಲ್ಲ ಗೊತ್ತು...
ಹಾಗೇ ಕರಗುವ ಕನಸಿನಂತೆಯೂ ಅಲ್ಲ...
ಕನಸು ಕರಗದಂತೆ ಗಟ್ಟಿಯಾಗಿಸಬೇಕು...

ಮೊದಲ ಮೊಳಕೆ ಗುರುತಿಸುವಂತ ಗಿಡವನ್ನಾಗಿಸಲೇ ಬೇಕು... ಆ ಗಿಡದ ಫಲದಿಂದ ಇನ್ನಷ್ಟು ಗಿಡಗಳನ್ನು ನೆಡಬೇಕು....

ಅದರ ಆರಂಬದ ಈ ದಿನ ಎಂದೂ ಮರೆಯಲಾಗದ್ದು....

Saturday, September 5, 2009

ತುಂಬಾ ಕಾಡ್ತಾದ ಈ ಹಾಡು

ಕಳೆದ ಕೆಲವು ದಿನಗಳಿಂದ ತುಂಬಾ ಕಾಡ್ತಾ ಇದೆ ಈ ಹಾಡು... ನೀನ್ನಟ್ಟಿಗೆ ಬೆಳಕಂಗಿದ್ದೆ ನಂಜು.... ಒಂಟಿ ಹಾದಿಯ ನನ್ನ್ ಪಯಣದಲ್ಲಿ ನೆನಪುಗಳೆನೋ ತುಂಬಾ ಜೊತೆಯಾಗಿವೆ...
ಆ ನೆನಪುಗಳು ಕೊಡುವ ಕಾಟ ಮಾತ್ರ ನನಗೆ ಒಂಟಿತನ ನೆನಪು ಮಾಡ್ಕೊಳ್ಲೋದಿಕ್ಕು ಟೈಮೇ ಕೊಡ್ತಾ ಇಲ್ಲ...
ಅಂತದ್ರಲ್ಲಿ ರತ್ನಂ ನ ನಂಜಿಯ ನೆನಪುಗಳು ನನ್ನನ್ನ ಯಾಕ್ ಹಿಂಗ್ ಕಾಡ್ತಾ ಇದೆಯೋ ಗೊತ್ತಾಗ್ತಾ ಇಲ್ಲ