Sunday, July 29, 2012

ಸೋತ ಮಗನ ಪತ್ರ

ಪಿತಾಜಿ ಕೊನೆಗೂ ಸೋತೆ..ನಿಮ್ಮನ್ನು ಕಳೆದುಕೊಂಡ ದಿನದಂದು ನಾನು ಮಾತು ಕೊಟ್ಟಂತೆ ಯಾವ ಕಾರ್ಯವನ್ನು ಈ ಎರಡು ವರ್ಷಗಳಲ್ಲಿ ನನ್ನಿಂದ ನೆರೆವೇರಿಸಲು ಸಾದ್ಯವಾಗಲಿಲ್ಲ. ನಾನು ಮಾತು ಕೊಟ್ತ ದಿನಕ್ಕೆ ಇನ್ನೂ ೨೫ ದಿನಗಳು ಬಾಕಿ ಇವೆ. ಆದರೆ ಈ ಎರಡು ವರ್ಷಗಳಲ್ಲಿ ಸಾಧ್ಯವಾಗದಿದ್ದದ್ದು.. ಈ ೨೫ ದಿನಗಳಲ್ಲಿ ಸಾಧ್ಯವಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ನೀವು ಇಟ್ಟಿದ್ದ ನಂಬಿಕೆಯನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ. 


ನನ್ನನ್ನು ಕ್ಷಮಿಸಿ ಎಂದು ಕೇಳಿಕೊಳ್ಳಲು ಅರ್ಹನಾಗದೆ ಹೋದೆ. ಜೀವನದ ಹಾದಿಯಲ್ಲಿ ಕನಸುಗಳ ಬೆನ್ನೇರಿ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲಾಗದ ಮಗನಾದೆ. ನನ್ನ ಕ್ಷಮಿಸಿಬಿಡಿ. ನನ್ನ ಹಾದಿಯಲ್ಲಿ ಸೋತ ನಾನು ನನ್ನ ಹಾದಿಯನ್ನು ಬದಲಿಸ ಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಗೊಂದಲದಲ್ಲಿದ್ದೇನೆ. 


ಕನಸಿನ ಬೆನ್ನೇರಿ ಹೊರಟ ಜೀವನ ಪಯಣ ಮಗ್ಗುಲು ಬದಲಿಸುವ ಸಮಯ ಬಂದಿದೆಯೇನೊ ಎಂಬ ನಂಬಿಕೆ ಬಲವಾಗಿ ಕಾಡುತ್ತಿದೆ. ಕನಸಿನ ಬೆನ್ನೇರಿ ಸಾಗುವ ಜೀವನದ ಹಾದಿ ಸುಗಮವಲ್ಲವೆಂದು ತಿಳಿದಿದ್ದರು ನನ್ನ ಮೇಲೆ ನನಗಿರುವ ನಂಬಿಕೆಯ ಬುನಾದಿಯ ಮೇಲೆ ಪಯಣ ಆರಂಭಿಸಿ ಕುಂಟುತ್ತಾ ಇಲ್ಲಿಯವರೆಗು ಸಾಗಿ ಬಂದೆ.. ಆದರೆ .. ಆ ಹಾದಿ ಈಗ ಡೇಡ್ ಎಂಡ್ ಗೆ ಬಂದಿದೆಯೇನೋ ಎಂದು ಅನಿಸುತ್ತಿದೆ.. ಈಗ ಹಾದಿ ಬದಲಿಸಲೇ ಬೆಕಾದ ಅನಿವಾರ್ಯತೆಗಳು ಎದುರಾಗಿವೆ.. ಇಲ್ಲಿಯವರೆಗಿನ ಹಾದಿಯಲ್ಲಿ ಗೆಲುವನ್ನು ಕಾಣದಿದ್ದರು ಸೋಲನ್ನು ಕಂಡವನಲ್ಲ.. ನಿಮ್ಮನ್ನು ಕಳೆದುಕೊಂಡಾಗಲು ನೀವಿದ್ದೀರ ಎಂಬ ನಂಬಿಕೆಯಿಂದಲೆ ಇಲ್ಲಿಯವರೆಗು ಸಾಗಿದೆ. ಈಗ ನೀವಿಲ್ಲವೆಂದೇನೂ ಅನಿಸದಿದ್ದರು.. ಎಲ್ಲೋ ನಾನು ಸಾಗುತ್ತಿರುವ ಹಾದಿಗೆ ಸದ್ಯದ ಮಟ್ಟಿಗೆ ಭವಿಶ್ಯವಿದೆಯೆಂಬ ನಂಬಿಕೆ ಬರುತ್ತಿಲ್ಲ. ಬಲವಂತವಾಗಿ ನನ್ನ ಹಾದಿಯನ್ನು ಬದಲಿಸಲೇ ಬೇಡವೇ ಎಂಬ ಗೊಂದಲದಲ್ಲಿ ನಾನಿಂದಿದ್ದೇನೆ.. ಅದೂ ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶವಿದ್ದು.. ಈಗಾಗಲೇ ಕೆಲಸ ಮಾಡುತ್ತಿದ್ದು ಸಹ ನನಗೆ ಇದರಲ್ಲಿ ಸದ್ಯದ ಕ್ಲಿಷ್ಟ ಸನ್ನಿವೇಶವನ್ನು ಎದುರಿಸಬಹುದೆಂಬ ನಂಬಿಕೆಯ ಪರಿಹಾರ ತೋಚುತ್ತಿಲ್ಲ. ಇಷ್ಟು ವರ್ಶಗಳ ಹಾದಿಯಲ್ಲಿ ಕಳೆದ ತಿಂಗಳ ನನ್ನ ಪ್ರಯತ್ನದ ಹೊರತಾಗಿ ನನಗೆ ಸಾಗಿ ಬಂದ ಹಾದಿಯ ಬಗ್ಗೆ ಹೆಮ್ಮೆಯಿದೆ. ಆದರೆ ಸದ್ಯದ ಸಮಸ್ಯೆಗಳಿಂದ ಹೊರಬರುವ ಹಾದಿಯೇ ಕಾಣುತ್ತಿಲ್ಲ.

ಇಲ್ಲಿಯವರೆಗು ವಿರೋದಿಸುತ್ತಲೇ ಬಂದ ಕೆಲಸದ ಫಾರ್ಮೆಟ್ಟಿಗೆ ಜೋತು ಬೀಳುವುದಾ ಅಥವಾ.. ಇನ್ನೂ ಸ್ವಲ್ಪ ದೂರ ಈ ಹಾದಿಯಲ್ಲೇ ಸಾಗುವುದಾ? ಪಿತಾಜಿ ನನಗೆ ದಾರಿ ತೋರಿಸಿ.