Wednesday, May 5, 2010

ಯ್ಯಾರ್ಯಾರ ನೆನೆಯಲಿ.. ಎಂದರೋ ಮಹಾನುಭಾವುಲು, ಅಂದರಿಕಿ ವಂದನಮುಲು...

ನನ್ನ ಸೋಮಾರಿತನದಿಂದಾಗಿ ಈ ಬ್ಲಾಗ್ ಬರೆಯಲು ಇಷ್ಟು ದಿನಗಳು ಬೇಕಾಯಿತು...
ಅದು ನನ್ನ ಜೀವನದಲ್ಲಿ ಮರೆಯಲಾಗದ , ಮರೆಯಲು ಸಾದ್ಯವೇ ಇಲ್ಲದ ಸಂತೋಷದ ಕ್ಷಣಗಳನ್ನು ದಾಖಲಿಸಲು ಇಷ್ಟು ದೀರ್ಘ ಸಮಯ ಬೇಕಾಯಿತು..
ಡಿಸೆಂಬರ್ ೧೩ ನನ್ನ ಜೀವನದ ಮರೆಯಲಾಗದ ಅತ್ಯಮೂಲ್ಯದ ದಿನ. ನನ್ನ ಮೊದಲ ಮತ್ತು ಏಕವ್ಯಕ್ತಿಯ ಕಲಾ ಪ್ರದರ್ಶನದ ದಿನ.. ಹೌದು ಮೊದಲನೆಯದು ಯಾಕೆಂದರೆ.. ನನ್ನ ಅಕಾಡೆಮಿಕ್ ವಿದ್ಯಾರ್ಥಿ ಜೀವನದ ನಂತರ ವೃತ್ತಿಪರ ಕಲಾವಿದನಾದ ಮೇಲೆ ನಾನು ಮಾಡಿದ ಮೊದಲ ಕಲಾಪ್ರದರ್ಶನ ಅದೂ ಏಕವ್ಯಕ್ತಿ, ಸಾರ್ವಜನಿಕವಾಗಿ... ಸಾರ್ವಜನಿಕರ ಮಧ್ಯೆ..

ಬಾಷ್ ಅನುದಾನ ಸಿಕ್ಕಿದ್ದಾಗ ಇದ್ದ ಖುಷಿ ಪ್ರದರ್ಶನದ ದಿನಾಂಕ ನಿಗದಿ ಮಾಡಿ ಆ ದಿನ ಹತ್ತಿರ ಬರುತ್ತಿದ್ದಂತೆ ಭಯ ಹೆಚ್ಚಾಗತೊಡಗಿತು. ಕಾರಣ ನಾನು ಮಾಡಲು ಹೊರಟಿದ್ದ ಪ್ರದರ್ಶನ ಇಲ್ಲಿಯವರೆಗು ನಾನು ಯಾವತ್ತು ಕಂಡಿರದಿದ್ದ ಅನುಭವವಿಲ್ಲದ ಸಾರ್ವಜನಿಕ ಕಲಾಪ್ರದರ್ಶನ. ಅದು ಮೆಜೆಸ್ಟಿಕ್ ಬಳಿ ..





ಪ್ರಶಾಂತ್, ವೆಂಕಟೇಶ್, ರ ಸಹಕಾರ ಮತ್ತು ಅನಿಲ್ ಸರ್ ಪ್ರತಿದಿನ ಕೊಡುತ್ತಿದ್ದ ಆತ್ಮಸ್ಥೈರ್ಯ. ಅಪ್ಪ ಮಾಡುತ್ತಿದ್ದ ಪ್ರತಿದಿನದ ಫೋನ್ ಕಾಲ್ .. ಇಷ್ಟು ಒಟ್ಟಾರೆ ನನಗಿದ್ದ ಸಾಥ್. ಇವೆಲ್ಲದರ ಜೊತೆಗೆ ಬಿಬಿಎಂಪಿಯವರು ತುಂಬಾ ಸತಾಯಿಸದೆ.. ಕೊನೆ ಘಳಿಗೆ ಅಂದರೆ ಭಾನುವಾರ ಪ್ರದರ್ಶನಕ್ಕೆ ಶುಕ್ರವಾರ ರಾತ್ರಿ ೯.೩೦ ಕ್ಕೆ ಅನುಮತಿ ಪತ್ರ ಕೊಟ್ಟಿದ್ದು. ಥ್ಯಾಂಕ್ಸ್ ಟು ಛೀಫ್ ಇಂಜಿನಿಯರ್ ಬಿಟಿ.ರಮೇಶ್ ಸರ್.... ಇದಕ್ಕು ಮೊದಲು ನಾನು ಬಯಸಿದ್ದ ರೀತಿಯಲ್ಲೇ ನನಗೆ ಕಟೌಟ್ ಬರೆದು ಕೊಟ್ಟ ರಾಜ್ ಕಮಲ್ ಆರ್ಟ್ಸ್.. ಚಿನ್ನಪ್ಪ ನವರನ್ನು ಹೇಗೆ ಮರೆಯಲು ಸಾದ್ಯ?



ಪ್ರದರ್ಶನಕ್ಕೆ ಡಿಜಿಟಲ್ ಕಟೌಟ್ ರೆಡಿ ಆಗಿದ್ದು ಶನಿವಾರ.
ಪ್ರದರ್ಶನಕ್ಕೆ ಸಹಾಯ ಮಾಡಲು ಶನಿವಾರ ಸಂಜೆಯಿಂದಲೇ ಜೊತೆಯಾದ ಮಾವ ಸೋಮ ಮತ್ತು ಫ್ರೆಂಡ್ಸ್ ಹರಿ, ಗಿರಿ ರಾತ್ರಿ ಅಲ್ಲಿಗೆ ಬಂದ ಕನಕ, ಬೆಳಗ್ಗೆ ಬಂದ ಲಕ್ಷ್ಮಿನಾರಾಯಣ ಕೊನೆಯವರೆಗೂ ಇದ್ರು...
ಹರಿ ಕಾರಲ್ಲಿ ಎಲ್ಲಾ ಮೆಟೀರಿಯಲ್ ತೆಗೆದುಕೊಂಡು ಹೋಗಿ ಅಲ್ಲಿ ಫಿಕ್ಸ್ ಮಾಡಿ ಮುಗಿಸಿದಾಗ ರಾತ್ರಿ ಮುಗಿದು ಮುಂಜಾನೆ ಮೂರು ಘಂಟೆ ಆಗಿತ್ತು.
ಬೆಳಗ್ಗೆ ಆರುಘಂಟೆಗೆ ಹೋಗಿ ವಿಡೀಯೋ ಡಾಕ್ಯುಮೆಂಟೇಶನ್ ಮಾಡಲು ತೊಡಗಿದ ನನಗೆ ನನ್ನ ಆ ಪ್ರದರ್ಶನ ಅಷ್ಟು ಯಶಸ್ವಿಯಾಗಿ ನನಗೆ ನನ್ನದೇ ಆದ ಒಂದು ಐಡೆಂಟಿಟಿ ಕೊಡುತ್ತದೆಂದು.
ನನ್ನ ಪ್ರದರ್ಶನದ ಮೊದಲ ವೀಕ್ಷಕರು ಅನಿಲ್ ಮತ್ತು ಸುರೇಖಾ... ಬೆಳಗ್ಗೆ ಏಳು ಘಂಟೆಗೆ ಬಂದಿದ್ದರು.



ಅಲ್ಲಿಗೆ ನನ್ನಲ್ಲಿದ್ದ ಅಳುಕೆಲ್ಲಾ ಮಾಯವಾಗಿ ಆತ್ಮವಿಶ್ವಾಸ ನೂರ್ಮಡಿಯಾಯ್ತು
ಮುಂದೆ ನಡೆದಿದ್ದಲ್ಲ ನನ್ನ ಆರು ತಿಂಗಳ ಕನಸಿನ ಸಾಕಾರ.. ಬಂದು ಬೆನ್ನು ತಟ್ಟಿದ ಮಿತ್ರರು.. ಬಂಧುಗಳು.. ಎಲ್ಲರಿಗೂ ಸದಾ ಋಣಿ.



ಆತ್ಮೀಯ ಹಾಗು ನನ್ನ ಕಲಾ ವ್ಯಾಸಂಗದ ಅವದಿಯ ಪ್ರಾರಂಭದಿಂದಲೂ ನನಗೆ ಸ್ಕೆಚಿಂಗ್ ಗುರು, ಸಹಪಾಠಿ, ಮಾರ್ಗದರ್ಶಕ ನಂಜುಂಡ ಬೆಳಗ್ಗೆನೆ ಬಂದಿದ್ದು, ಅಪ್ಪ ಬರಬೇಕೆಂದು ತುಂಬಾ ಆಶಿಸಿದ್ದರು ಅನಾರೋಗ್ಯದಿಂದ ಬರಲಾಗದ್ದು ಬೇಸರವಾದರು ಅಮ್ಮ ಹೇಮಕ್ಕ ಬಂದಿದ್ದು ಆ ಬೇಸರವನ್ನು ಸ್ವಲ್ಪ ಮಟ್ಟಿಗೆ ಮರೆಸಿತು.








ಮದ್ಯಾಹ್ನದ ವೇಳೆಗೆ ಅಲ್ಲಿಗೆ ಬಂದ ಸಂಪದ ಮಿತ್ರರೊಂದಿಗೆ ಕಳೆದ ಕ್ಷಣಗಳು ಯಾವತ್ತೂ ನೆನೆಯುವಂತಹುದು. ಅಲ್ಲಿ ಶಿವು ಮತ್ತು ಸವಿತ ಮಾಡಿದ ಚುಟುಕು ಸಂದರ್ಶನ

ನನ್ನ ಪ್ರದರ್ಶನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ, ಪ್ರೋತ್ಸಾಹಿಸಿದ, ಎಲ್ಲಾ ಸ್ನೇಹಿತರಿಗು ನಾನು ಸದಾ ಋಣಿ. ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಮತ್ತಷ್ಟು ಆತ್ಮವಿಶ್ವಾಸ, ಸ್ಪೂರ್ತಿ, ಧೈರ್ಯ, ಜೊತೆಗೆ ಜವಾಬ್ದಾರಿಯನ್ನು ಕೊಟ್ಟಿದೆ.
ನಿಮ್ಮೆಲ್ಲರ ಸಹಕಾರ ಹೀಗೆ ಇರಲೆಂದು ಆಶಿಸುತ್ತೇನೆ.

ನನ್ನ ಪ್ರದರ್ಶನ ಮತ್ತು ನನ್ನ ಕುರಿತಾಗಿ ಪತ್ರಿಕೆಯಲ್ಲಿ ಬಂದ ಲೇಖನಗಳು...

ಹಿಂದು ಮೆಟ್ರೋ ಪ್ಲಸ್ ನಲ್ಲಿ

Drawing on the lines

Having enjoyed painting signboards and hoardings, Manjunath now has a Robert Bosch grant. NIKHIL VARMA finds the youngster involved in a whole lot of creative efforts


F rom painting signboards (being clueless about a career to choose) to bagging the prestigious Robert Bosch Art Grant, 25-year-old Manjunath has made a historical journey. Today, Manjunath is also involved in the BBMP's mega project of painting murals on walls to beautify the city.

Sketchy life

After completing his PUC, Manjunath began helping his brother at work, painting signboards. “There was no pressing financial constraint that forced us to take up the job. I used to enjoy painting hoardings. In the course of these assignments, I decided that studying art would help me in showcasing the tribulations that people face in their everyday life. I decided to enrol for fine arts in college.”

That decision shocked his parents and they tried their best to dissuade him. “My parents wanted me to stick to a conventional career as they were not very sure that fine arts would provide a steady income. I managed to convince them and enrolled at the Chetan College of Fine Arts in the city.”

“In the course of my assignments, I had to present a series of live sketches. I decided to complete these sketches at the City Railway Station at Majestic.”

“Over a period of time, I got hooked to making live sketches of commuters using the trains, the scenes that unfold at the station when a train arrives, the waiting passengers etc. Many people were impressed and asked me to create their portraits. I used to spend most of my evenings at Majestic drawing these sketches.”

The long hours he spent at the station has also landed him in some tight spots. “Once, at two in the night, some policeman grew suspicious and took me to the police station. Once I explained my hobby, one of the officers asked me to draw a portrait and let me go immediately.”

Art for the common man

After graduating, Manjunath took up the post graduate programme at the Karnataka Chitrakala Parishath. “The programme at the Parishath was excellent. It has the best teachers in art and also has a massive collection of literature on paintings and sculptures. It has helped enhance my understanding of the subject.”

With the monetary benefits of the Robert Bosch grant, awarded in recognition of the contribution of young and upcoming talents in the various fields of fine arts, he aims at bringing art to the common man. “The common man involved in his day-to-day pursuits plays a key role in many of my paintings. I feel that it is important that art is not restricted to big art galleries. I plan to exhibit these paintings at key points in the Majestic area. I hope that this will bring art closer to the common man and help evince interest in the fine arts.”

Apart from painting, Manjunath is also interested in making a documentary film on the Gowribidanoor incident of 1930, where police had gunned down nearly 32 people involved in the national movement. He contends,

“Some aspects of the freedom struggle have not been documented well. I plan to create more awareness about the incident.”

He is also interested in photography and says that the photograph is an evolution of painting. “Creative people are the best equipped to frame a shot. The only advantage that the painter holds is that he could easily blank out undesirable elements. That is more taxing for a photographer.”





ಬೆಂಗಳೂರು ಮಿರರ್...


Dreams on the Skywalk

From painting signboards to fund his education to sketching late night at Majestic for practice, Manjunath has done it all. Last year’s recipient of the Robert Bosch Art Grant, Manjunath has since evolved as an artist and is bubbling with ideas for the future

Jayanthi Madhukar
Posted On Monday, April 26, 2010 at 08:58:17 PM

Background
I started out by helping my brother at his signboard shop after I finished PUC. This spurred me to enroll at the Chetan College of Fine Arts. My family, including my father who worked as an attendor in the government, was initially skeptical but I managed to convince them otherwise. I started working after college hours as a signboard artist and whenever my shift finished, I would go to Majestic area to do live sketching of people. I have sketched at Majestic for five years. Later, I did my post graduation at Chitra Kala Parishad. This was an incredible experience for me because for the first time I came to understand the terms — visual arts, installations, video art etc.

Encounters
Once, two police constables got suspicious as I was sketching in Majestic in the wee hours of morning. They took me to the police station where a sub inspector questioned me. Later he asked me to sketch his portrait. He was so pleased with the sketch that he sent me back after giving me coffee. Also, once when I was walking in the underpass to the railway station, I found that my wallet had been pick pocketed. I was dejected as the wallet had my bus pass, ID card and important contact numbers. A boy who worked there as a labourer asked me why I wasn’t sketching as usual. When I told him, he asked me not to lodge a police complaint and ran away. Within half an hour, he came back with my wallet — all its contents intact. The pickpocketeers in the area soon became my friends and would regularly buy me tea or coffee. In return, I would do their sketches. There are good Samaritans everywhere.

The Project
I used to sit down at the skywalk near Santosh Theatre and do my sketches. I would see the massive cutouts of the Kannada heroes and think how the ordinary people who have worked in the vicinity for years react on seeing their pictures as huge cutouts. This sparked my idea of doing a show at Majestic for the people there in their neighbourhood. Take them to a gallery and they would be too nervous to talk but at Majestic, they would be bindaas. With the grant money, I applied for all necessary permissions and painted four vendors who have been working there for years. I put up my paintings on the skywalk as well as a huge banner about 8’ X 104’ along the skywalk. I have recorded their reactions on seeing these works. This was shown in my first art show but I have given a copy each to the ‘models’ as well, so that they can cherish their moment of fame.

Future
Now, I am more confident. I have big plans. My friends and I have published a book in Kannada, which is a compilation of articles from eminent artists who talk about the various milestones in the history of Karnataka art. I want to start an open source website for arts.

Monday, May 3, 2010

ನೀನು

ಮನಸಿನ ಮೌನದ ಹಾದಿಗೆ

ಮಾತಿನ ಜೊತೆಯಾದೆ ನೀನು..

ಪದವರಿಯದ ಅಕ್ಷರಗಳಿಗೆ

ವಾಕ್ಯವಾದೆ ನೀನು..

ನನ್ನೊಳಗೆ ನಾನರಿಯದ ಪ್ರೀತಿಯ

ಕನ್ನಡಿಯೊಳಗೆ

ಪ್ರತಿಫಲಿಸಿದೆ ನೀನು..

ನಾ ಕೂಗದ ದನಿಗೆ

ಪ್ರತಿಧ್ವನಿಯಾದೆ ನೀನು..

ನಿನಗಾಗಿ ಬರೆಯದ

ಕವನಗಳಿಗೆ ಕ್ಲೀಷೆಯಾದೆ ನೀನು..

ನಾ ಬಯಸದ ಸನಿಹಕೆ

ಬಿಸಿಯಪ್ಪುಗೆಯ

ಸವಿ ನೀಡಿದ್ದು ನೀನು..

ಈಗ

ನಾ ಬಯಸಿದರೂ

ನನ್ನ ಬಿಟ್ಟು ನಿನ್ನ ಪಯಣಕೆ

ಹೊರಟು ನಿಂತಿರುವೆ ನೀನು....


ಮಂಸೋರೆ.

Thursday, April 29, 2010

ಮೆಟ್ರೋ ಬ್ಯಾಂಗಲೂರಿಗೆ ಹೊಸ cultural identity "ಬೆಂಗಳೂರು"

ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ’ಬೆಂಗಳೂರು’ ಎಂದು ’ನಾಮಕರಣ" ಮಾಡಿ ಅಧಿಕೃತವಾಗಿ ಘೋಷಿಸಲಾಯಿತು.







ಈ ಮೇಲಿನ ವಾಕ್ಯವನ್ನೇ ನಾನು ಇಲ್ಲಿನ ಸ್ನೇಹಿತರ ಬಳಿ ಹೇಳುವುದಾದರೆ ಬ್ಯಾಂಗ್ಲೂರು ಇನ್ಮುಂದೆ ಬೆಂಗಳೂರು...
ಇದೇ ಮಾತನ್ನು ನನ್ನ ಹಳ್ಳಿಯಲ್ಲಿ ಹೇಳುವುದಾದರೆ ಬೆಂಗ್ಳೂರು ಇನ್ಮುಂದೆ ಬೆಂಗಳೂರು ಎಂದು....

ಇಲ್ಲಿ ಬೆಂಗಳೂರು ಎಂಬ ಪದ ಮೂರು ಬೇರೆ ಬೇರೆ ವಾತಾವರಣದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಗುರುತಿಸಿಕೊಳ್ಳುವುದು..
ಒಂದು ಸರ್ಕಾರದ ಅಧಿಕೃತ ದೃಷ್ಠಿಕೋನ...
ಇನ್ನೆರೆಡು ಸಮಯ, ಸಂಧರ್ಭ ಮತ್ತು ಸ್ಥಳಗಳನ್ನು ಆದರಿಸಿ ಹೆಸರನ್ನು ಉಚ್ಚರಿಸುವುದು..

ನಗರ ಒಂದೇ ಆದರು ಮೂರು ವಿಭಿನ್ನ ಉಚ್ಚರಣೆ ಪಡೆದಂತೆ ನಗರವು ಮೂರು ವಿಭಿನ್ನ ಸ್ಥರಗಳಲ್ಲಿ ತನ್ನ ವಿಭಿನ್ನ ಸ್ವರೂಪಗಳನ್ನು ಪಡೆದುಕೊಳ್ಳುತ್ತದೆ.

ಸರ್ಕಾರವು ತನ್ನ ಅಧಿಕೃತ ಅಧಿಕಾರಿಯುತ ವ್ಯಾಪ್ತಿಗೆ ಬರುವ ಬೆಂಗಳೂರನ್ನು ಗುರುತಿಸುವುದು textನ್ಡ ಕಡತಗಳ ಮೂಲಕ.
ನನ್ನ ಸ್ನೇಹಿತರ ಬಳಿ ನಾನು ಗುರುತಿಸುವ ಬ್ಯಾಂಗ್ಲೂರು ನಮ್ಮ ದೈನಿಂದಿಕ ಜೀವನದ ಜೊತೆ ಬೆರೆತಿರುವ ಇಂಗ್ಲೀಷ್ ಪ್ರಭಾವದೊಂದಿಗೆ ಬಂದಿರುವ ನಗರೀಕರಣ್ದದ ಪ್ರಭಾವದ ಬೆಂಗಳೂರನ್ನು.
ನನ್ನ ಹಳ್ಳಿಯಲ್ಲಿ ಗುರುತಿಸುವ ಬೆಂಗ್ಳೂರು ನಗರದ ದೈನಿಂದಿಕ ಜೀವನವಲ್ಲದ, ಯಾವತ್ತೋ ಒಮ್ಮೆ ಅಥವ ಬೆಂಗಳೂರಿಗೆ ವಿಸಿಟಿಂಗ್ ಸ್ಥಿತಿಯಿಂದ ಬದಲಾಗದ ಹಳ್ಳಿಗರಿಗೆ ಅಕಾಡೆಮಿಕ್ textಆಡು ಭಾಷೆಯಲ್ಲಿ ಪರಿವರ್ತವಾಗುವ ಉಚ್ಚಾರಣೆ ಮತ್ತು ಕಲ್ಪನೆಯ ಬೆಂಗ್ಳೂರು.

ಬ್ಯಾಂಗ್ಲೂರು ಬೆಂಗಳೂರು ಆಗಬೇಕೆಂದು ಪ್ರತಿಪಾದಿಸಿದಾಗ ಅದಕ್ಕೆ ಸಾಹಿತಿ ಯು.ಆರ್. ಅನಂತಮೂರ್ತಿ ಯವರು ದನಿಗೂಡಿಸಿದ್ದರು... ಆ ಸಂದರ್ಭದಲ್ಲಿ ಆಶೀಶ್ ನಂದಿಯವರು ತಮ್ಮ ಲೇಖನದಲ್ಲಿ ಆಕ್ಷೇಪಿಸಿ.. ಮಹಾನಗರಗಳ ಹೆಸರನ್ನು ಬದಲಾಯಿಸುವುದರಿಂದ ಆಗಬಹುದಾದ ಸ್ಥಿತ್ಯಂತರಗಳ ಬಗ್ಗೆ ಚರ್ಚಿಸಿದ್ದಾರೆ*.






ಹೀಗೆ ಮಹಾನಗರ ಹೆಸರಿನ ಮೂಲಕ ಗುರುತಿಸಿಕೊಳ್ಳುವುದರಲ್ಲಿ ಮತ್ತು ಬದಲಾಯಿಸಿಕೊಳ್ಳುವುದರಲ್ಲಿನ ಸ್ಥಿತ್ಯಂತರಗಳ ಬಗ್ಗೆ ಚರ್ಚಿಸುವಾಗ ನನಗೆ ಆಸಕ್ತಿಯಾಗಿ ಕಾಣುವುದು ಈ ಮಹಾನಗರ ಜನಪ್ರಿಯ ದೃಶ್ಯಮಾದ್ಯಮವಾದ ಚಲನಚಿತ್ರಗಳಲ್ಲಿ ಗುರುತಿಸಲ್ಪಡುತ್ತಿದ್ದ ಬ್ಯಾಂಗ್ಲೂರ್ ಮತ್ತು ಅಂದಿನ ಗ್ರಾಮಾಂತರವಾಗಿದ್ದ ನಗರದ ಸುತ್ತಮುತ್ತ ಹಳ್ಳಿಯ ಜನರು ನಗರಕ್ಕೆ ಕೆಲಸಗಳಿಗಾಗಿ ಬರುತ್ತಿದ್ದಂತಹವರು, ನಗರ ಮಹಾನಗರವಾಗಿ, ಅಂದಿನ ಹಳ್ಳಿಗಳು ಇಂದಿನ ಬೃಹತ್ ಬೆಂಗಳೂರಲ್ಲಿ ಬೆರೆತು ಹೋದವರ ದೈನಿಂದಿಕ ಜೀವನದಲ್ಲಿ ಅವರು, ಅವರಿಗೇ ಅರಿವಾಗದಂತೆ ಅಥವ ಅರಿವಿದ್ದೂ ಅದನ್ನು ನೆನಪಿಗಷ್ಟೇ ಉಳಿಸಿಕೊಳ್ಳಲು ಇಷ್ಟಪಡುವ, ನಿಧಾನವಾಗಿ ಬದಲಾಗುವ ಸ್ಥಿತ್ಯಂತರಗಳ ಬಗ್ಗೆ ನನ್ನ ಆಸಕ್ತಿ ಇರುವುದು.

ಹಿಂದೆ ಚಲನಚಿತ್ರಗಳ ಪ್ರಾರಂಭದ ದಿನಗಳಲ್ಲಿ ಚಲನಚಿತ್ರಗಳು ಬಹುತೇಕ ಸ್ಟುಡಿಯೋಗಳ ಒಳಗೆ ಚಿತ್ರಿತವಾಗುತ್ತಿತ್ತು. ಚಿತ್ರಗಳು ಆಗ ಸ್ಟುಡಿಯೋಗಳಿಗೆ ಹೋಗಿ ಅಲ್ಲಿ ಮೊದಲೆ ರೆಡಿಯಾಗಿರುತ್ತಿದ್ದ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಕ್ರಮೇಣ ಈ ಸ್ಟುಡಿಯೋಗಳ ಒಳಗೆ ಹಾಕಿರುತ್ತಿದ್ದು ಸೆಟ್ ಗಳಲ್ಲಿ ಚಿತ್ರೀಕರಣ ಮಾಡಲು ಏಕತಾನತೆ ಕಾಡತೊಡಗಿದ್ದಾಗ ಮತ್ತು ಸೆಟ್ ಗಳ ನಿರ್ವಹಣೆ ಅಪಾರ ವೆಚ್ಚವಾಗುತ್ತಿದ್ದಾಗ ಹೊರಾಂಗಣ ಚಿತ್ರೀಕರಣ ಹೆಚ್ಚು ಪ್ರಚಲಿತ , ಸುಲಭ ಮತ್ತು ಹೆಚ್ಚು ನಿಖರವಾದ ಹಿನ್ನಲೆಗಳು ಮೂಡತೊಡಗಿತು.

ಇಂತಹ ಸಂಧರ್ಭದಲ್ಲಿ ಚಿತ್ರಕಥೆಯು ಹೆಚ್ಚು ಸ್ಥಳ ನಿರ್ಧಿಷ್ಟತೆಯನ್ನು ಬಯಸಿದಾಗ ನಗರಗಳು ಆಗ ಹೆಚ್ಚು ಪರಿಚಿತ,ಪ್ರಚಲಿತವಿರುವ ಸ್ಥಳಗಳು cinematic identity ಪಡೆಯತೊಡಗಿತು. ಜನಸಾಮಾನ್ಯರನ್ನು ಅತಿ ಹೆಚ್ಚು ಬೇಗ ಆಕರ್ಶಿಸಿ, ಅವರ ಮೇಲೆ ಪ್ರಭಾವ ಬೀರಿದಂತ ಮಾದ್ಯಮ ಚಲನಚಿತ್ರ. ಇಂತಹ ಮಾದ್ಯಮದಿಂದಾಗಿ ಮುಂದೆ ನಗರಗಳಿಗೆ ಭೇಟಿ ಕೊಡುವವರಿಗೆ ಈ cinematic identity ಪಡೆದಂತಹ ಸ್ಥಳಗಳು visiting place ಆಗಿ, ಅವು ನಗರಗಳನ್ನು ಪ್ರತಿನಿದಿಸುವಂತ ಸ್ಥಳಗಳಾಗಿ ಮಾರ್ಪಟ್ಟಿತು.
ಸ್ವಾತಂತ್ರ್ತ್ಯ ಪೂರ್ವದಲ್ಲಿ ಬ್ರಿಟೀಷರಿಂದ ನಿರ್ಮಾಣಗೊಂಡ ಹೈಕೋರ್ಟು ಲಾಲ್ ಬಾಗ್ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿ ಎಂ.ಜಿ.ರಸ್ತೆ ಮತ್ತು ಸ್ವಾತಂತ್ರ್ಯಾ ನಂತರ ನಿರ್ಮಾಣವಾದ ವಿಧಾನಸೌದ,ಕೆಂಪೇಗೌಡ ಬಸ್ ನಿಲ್ದಾಣ, ಯುಟಿಲಿಟಿ ಬಿಲ್ಡಿಂಗ್ ಬೆಂಗಳೂರನ್ನು ಪ್ರತಿನಿದಿಸ ತೊಡಗಿದವು, ಅಥವ ಬೆಂಗಳೂರಿಗೆ cinematic representative ಆಗಿ ಪರಿವರ್ತನೆಯಾಯಿತು.

ಮುಂದೆ ಬೆಂಗಳೂರಿನ ವಾತಾವರಣ ಔದ್ಯೋಗಿಕರಣ, ಐಟಿ-ಬಿಟಿಯ ಪ್ರಮುಖ ಕೇಂದ್ರಸ್ಥಾನವಾಗಿ ಬದಲಾದಂತೆ ಇಲ್ಲಿಗೆ ವಲಸಿಗರು ಬರುವುದೂ ಹೆಚ್ಚಾಗತೊಡಗಿತು.ಈ ವಲಸೆ ಮತ್ತು ಕಿರುತೆರೆಯಲ್ಲಿ ಖಾಸಗಿ ಚಾನೆಲ್ ಗಳು ಹೆಚ್ಚಾದಂತೆ ನಗರಗಳು ಹೆಚ್ಚು ಬೆತ್ತಲಾಗತೊಡಗಿದವು.





ಜಾಗತೀಕರಣದ ಕೊಡುಗೆಯಾದ, ವಲಸಿಗರು ಮತ್ತು ಕೈಗಾರಿಕೆಗಳು ಹೆಚ್ಚಾಗತೊಡಗಿದಂತೆ ನಗರ ತನ್ನ ಸುತ್ತಮುತ್ತ ಇದ್ದ ಕೃಷಿಚಟುವಟಿಕೆಯ ಜಮೀನಿನ ಜೊತೆಗೆ ಹಳ್ಳಿಗಳನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳತೊಡಗಿತು. ಹಳ್ಳಿಗಳು ನಗರವಾಯಿತು.

ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಬೆಂದಕಾಳೂರಾಗಿದ್ದ ಸಣ್ಣ ಊರು ಮುಂದೆ ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಂಗಳೂರಾಗಿ ಮಾರ್ಪಟ್ಟಿತು.. ಆದರೆ ಜಾಗತಿಕರಣದ ಪ್ರಭಾವದಿಂದಾಗಿ ಮಹಾನಗರದೊಳಗೆ ಸೇರಿ ಹೋದ ಹಳ್ಳಿಗಳಿಗೆ ಈ ಧೀರ್ಘ ಅಂತರವಿಲ್ಲದೆ ದಿಡೀರನೆ ಮಹಾನಗರದ ಭಾಗವಾಗಿ ಬದಲಾಯಿತು.
ಇಲ್ಲಿನ ಜನಜೀವನ ಕೆಲವೇ ವರ್ಷಗಳಲ್ಲಿ ಜಾಗತೀಕರಣಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡರು.
ಹಸುಗಳನ್ನು ಸಾಕಿ ಮೇಯಿಸಿ ಅದರ ಹಾಲನ್ನು ಮನೆಗೆ ಬಳಸಿಕೊಳ್ಳುತ್ತಿದ್ದವರು ಪ್ಯಾಕೆಟ್ ಹಾಲಿಗೆ ಒಗ್ಗಿಕೊಂಡರು..
ನಗರಕ್ಕೆ ಬರಬೇಕಂದರೆ ವಿಶೇಷ ಆಸ್ಥೆ ತೋರಿಸುತ್ತಿದ್ದವರು, ಆ ಬಸ್ಸಿಗಾಗಿ ಕಾಯುತ್ತಿದ್ದವರು ಇಂದು ನಗರ ಸಾರಿಗೆ ಬಸ್ಸುಗಳಲ್ಲಿ ತೂರಾಡಿಕೊಂಡು, ಸೀಟ್ ಸಿಕ್ಕಿದ ತಕ್ಷಣ ನಿದ್ದೆಗೆ ಜಾರುವುದರಲ್ಲಿ ಬ್ಯುಸಿಯಾದರು.






ಈ ಜಾಗತೀಕರಣಕ್ಕೆ ಒಗ್ಗಿಕೊಂಡರು ತಮ್ಮ ಮೂಲದ ಪ್ರಭಾವದಿಂದ ಮಾನಸಿಕವಾಗಿ ಹೊರಬಂದಿಲ್ಲದಿರುವುದನ್ನು ಅವರ ದೈನಂದಿಕ ಜೀವನದಲ್ಲಿ, ಅವರ ಉಡುಗೆ ಜೀವನ-ತೊಡುಗೆ ಜೀವನ ಪದ್ದತಿಯಲ್ಲಿ ಮತ್ತು ಸಾಂಸ್ಕೃತಿಕವಾಗಿ ನೋಡಿದಾಗ, ಅವರು ಆಚರಿಸುತ್ತಿದ್ದ ಊರಹಬ್ಬಗಳು ಇಂದು ಏರಿಯಾಗೊಂದರಂತೆ ಆಚರಿಸುವುದರಲ್ಲಿ ಕಾಣಬಹುದು.
ಕೆಲಸಕ್ಕೆ ಹೋಗಿ ಬರುವ ಮಧ್ಯಮ ವರ್ಗದ ಗಂಡಸರು ಮನೆಗೆ ಬರ್ತಿದ್ದ ಹಾಗೆ ನೈಟ್ ಪ್ಯಾಂಟ್ ಹಾಕುವುದರ ಬದಲು ಲುಂಗಿ, ಪಂಚೆ ಉಡುವುದರಲ್ಲಿ ಕಾಣಬಹುದು.
ಜಾಗತೀಕರಣದ ಪ್ರಮುಖ ಲಕ್ಷಣವಾಗಿ ಕಾಣುವ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಸಂಸ್ಕೃತಿಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲಾಗದ ಈ ವರ್ಗದ ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್ ಮೇಲೆ ಚೂಡಿದಾರ್ ಟಾಪ್ ಹಾಕ್ಕೊಂಡು ಜೆಡೆ ಹೆಣೆದುಕೊಂಡಿರುವುದರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.





ಈಗ ವಿಜ್ಙಾನ ಮತ್ತು ಐ.ಟಿ, ಬಿ.ಟಿ ಗಳ ನೆಲವೀಡು ’ಬ್ಯಾಂಗಲೋರ್’ ಎಂದು ಸಾರುವಾಗ ಗಮನಿಸಬೇಕಾದ ಅಂಶವೆಂದರೆ.. ಈ ’ಬ್ಯಾಂಗಲೋರ್’ ’ಬೆಂಗಳೂರಿನ’ ಜೀವಂತ ವಿಮರ್ಶೆ. ಮಹಾನಗರಗಳಿಗೆ ನಿರ್ಧಿಷ್ಟ ಐಡೆಂಟಿಟಿ ಇರುವುದಿಲ್ಲವಾದರು ಬ್ಯಾಂಗಲೂರಿನ ವಿಷಯದಲ್ಲಿ ಆ ಹೇಳಿಕೆ ಅಷ್ಟು ಸೂಕ್ತವೆನಿಸುವುದಿಲ್ಲವೇನೊ ಅಂತನಿಸುತ್ತದೆ.. ಕಾರಣ ಬೆಂಗಳೂರು ತನ್ನ ಸುತ್ತಲೂ ಬೆಳೆಯುತ್ತಿದ್ದು , ಅದು ಬೆಳೆದಂತೆಲ್ಲ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವುದು ತನ್ನದೇ ಈ ಹಿಂದಿನ ಮೂಲರೂಪವಾದ ಹಳ್ಳಿಗಳನ್ನು ಮತ್ತು ಹಳ್ಳಿಗಳ ಸಂಸ್ಕೃತಿಯನ್ನು...

ಇದರಿಂದಾಗಿ ಇದು ಎಷ್ಟೇ ಮೆಟ್ರೋ ಪಾಲಿಟಿನ್ ನಗರವಾದರು ತನ್ನದೇ ಆದ ವಿಶಿಷ್ಠವಾದ ’ಹೊಸ ಸಾಂಸ್ಕೃತಿಕ ಗುರುತು’ cultural identity ಯನ್ನು ತನ್ನ ಹೆಸರಿನೊಂದಿಗೆ ಗುರುತಿಸಿಬಹುದಾಗಿದೆ. ಇದು ಈ ಹಿಂದೆ ಮತ್ತು ಈಗಿನ ಚಲನ ಚಿತ್ರಗಳ ಮೂಲಕ ಗುರುತಿಸಬಹುದಾದ, ದಕ್ಷಿಣ ಭಾರತವೆಂದರೆ ಮದರಾಸಿಗಳು ಎಂದು ಗುರುತಿಸಲ್ಪಡುತ್ತಿದ್ದ ಸ್ಥಿತಿಯಿಂದ ಬೆಂಗ್ಳೂರಿಯನ್ಸ್ ಎಂದು ಗುರುತಿಸಲ್ಪಡಲು ತೊಡಗಿರುವ ಐ.ಟಿ-ಬಿ.ಟಿ identity ಗಿಂತ ವಿಭಿನ್ನವಾದ identity.

*2007 ಡಿಸಂಬರ್ ತಿಂಗಳ ಮಯೂರ ಸಂಚಿಕೆಯಲ್ಲಿ ಜಿ.ರಾಜಶೇಖರ್ ರವರ ಒಂದು ಊರು ಎರೆಡು ಮನಃಸ್ಥಿತಿಗಳು ಲೇಖನ ನೋಡಿ.

Monday, April 19, 2010

ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು

ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.

೭ ದಿನಗಳ ನಂತರ ಬರೆಯುತ್ತಿದ್ದೇನೆ.

ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.


ಈ ಚಿತ್ರವನ್ನು ಬರೆದುಮೊನ್ನೆ ೧೩ ಕ್ಕೆ ಒಂದು ವರ್ಶವಾಯಿತು.. ಆಗ ವಿಷ್ಣುವರ್ಧನ್ ರವರ ಸಿನಿಮಾಗೆ ರಚಿಸುತ್ತಿದ್ದೇನೆ ಎಂಬ ಖುಶಿ ಮಾತ್ರವಿತ್ತೇ ಹೊರತು.. ಒಂದು ವರ್ಶದನಂತರ ಹೀಗೆ ನೆನಪಿಸಿಕೊಳ್ಳುತ್ತೇನೆ ಎಂದು ಎಣಿಸಿರಲಿಲ್ಲ.

ಈ ಚಿತ್ರವನ್ನು ಸಿನೆಮಾದಲ್ಲಿ ಒಂದು ಸಣ್ಣ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆಯಾದರು... ಮರೆಯಲಾಗದ ನೆನಪನ್ನು ಮಾಡಿದೆ.

ಹಾಗೆ ಈ ಚಿತ್ರದಲ್ಲಿನ ಗರಗರನೆ ಹಾಡಿನಲ್ಲಿ ಬರುವ ಕಲಾವಿದನ ಪಾತ್ರವನ್ನು ನಾನು ಮಾಡಬೇಕಾಗಿತ್ತು...

ತೆರೆಯ ಹಿಂದೆಯೇ ಕೆಲಸ ಮಾಡಲು ಆಸಕ್ತಿ ಇದ್ದಿದ್ದರಿಂದ ಆ ಅವಕಾಶವನ್ನು ನಿರಾಕರಿಸಿದ್ದೆ.

ಆ ಪಾತ್ರವನ್ನು ಒಪ್ಪಿಕೊಂಡಿದ್ದರೆ ...

ನಾಲ್ಕು ದಿನಗಳು ವಿಷ್ಣುವರ್ಧನ್ ರೊಡನೆ ಮೈಸೂರಿನ ಲಲಿತಮಹಲ್ನಲ್ಲಿ ಚಿತ್ರೀಕರಣದಲ್ಲಿ ಕಳೆದ ದಿನಗಳು ಈಗ ಎಲ್ಲಾ ನೆನಪಾಗಿ ಕಾಡುತ್ತಿದೆ..

ಯೂಟ್ಯೂಬ್ನಲ್ಲಿ ಅಡ್ಡಾದುತ್ತಿದ್ದಾಗ ಸಿಕ್ಕಿದ್ದು..

ನಾನು ತುಂಬಾ ದಿನಗಳಿಂದ ನೋಡಲು ಕಾಯುತ್ತಿರುವ ಸಿನೆಮಾ ಇದು ಮರುದನಾಯಗನ್...

ಇದರ ವಿಶೇಷತೆಗಳು ಹಲವು...

ಅದರಲ್ಲಿ ಮುಖ್ಯವಾದುದು ಈ ಚಿತ್ರ ಬಿಡುಗಡೆಗೊಂಡರೆ... ವಿಷ್ಣುವರ್ಧನ್ ರವರ ಸಿನೆಮಾಗಳಲ್ಲಿ ಬಿಡುಗಡೆಯಾದ ಕೊನೆ ಸಿನೆಮಾ ಎಂಬ ಹೆಗ್ಗಳಿಕೆಯು ಆಪ್ತರಕ್ಷಕ ಸಿನೆಮಾದಿಂದ ಮರುದನಾಯಗನ್ ಪಾಲಾಗುತ್ತದೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ವಿಷ್ಣುವರ್ಧನ್ ರವರು ನಟಿಸಿದ್ದಾರೆ.

http://www.youtube.com/watch?v=ytQQm8J7PHY&feature=


Sunday, March 21, 2010

ನಗ್ನತೆ: ಸಮಕಾಲೀನ ಪುನರಾವಲೋಕನ


ನಗ್ನತೆ: ಸಮಕಾಲೀನ ಪುನರಾವಲೋಕನ


Wednesday, February 10, 2010

ಸಂಖ್ಯೆ ೧೪

ಮೊಬೈಲ್ ರಿಂಗಾಗ್ತಿತ್ತು...

ಅದು ಮೆಸೇಜ್ ರಿಂಗ್ ಟೋನ್...

ಲೆಕ್ಕ ಹಾಕ್ತಿದ್ದ 10...

ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ ನುಗ್ಗಿಸ್ಕೊಂಡು ಹೋಗ್ತಾ ಇದ್ದ ಅವನು...

ಅವನಿಗೊತ್ತು ಅದು ರೇಖಾ ಕಳಿಸ್ತಿರೋ ಮೆಸೇಜ್.. ಅಮರ್ ಹೋಟೆಲ್ ಮುಂದೆ ಇರುವ ದೇವಸ್ಥಾನದ ಹತ್ತಿರ ಕಾಯ್ತಾ ಇದ್ದಾಳೆ...

ಛೇ ಈ ಸಿಗ್ನಲ್ ಈಗ್ಲೇ ಬೀಳ್ಬೇಕಿತ್ತಾ...

ಗಾಡಿ ಆಫ್ ..

ರೇಖಾ ಜೊತೆ ಲಾಂಗ್ ಡ್ರೈವ್ ಹೋಗ್ಬೇಕಲ್ಲ ಪೆಟ್ರೋಲ್ ಇರ್ಲಿ...

ಮೂರು ವರ್ಷಗಳ ಪ್ರಯತ್ನದ ಫಲ ಇವತ್ತು ಬೆಳಗ್ಗೆ ಸಿಕ್ಕಿತ್ತು..

ಭಾನುವಾರದ ಬೆಳಗ್ಗೆ ಆಗಿದ್ರಿಂದ ಹಾಸಿಗೆಯಲ್ಲಿ ಮಲಗಿದ್ದೋನಿಗೆ ದಿನಾ ಏಳಕ್ಕೆ ಹೊಡ್ಕೊಳ್ಲೋ ಅಲಾರಂ ಹತ್ತು ಘಂಟೆವರೆಗೂ ಬಡ್ಕೊಳ್ತಾ ಇದ್ರೂ ಎಚ್ಚರಾನೆ ಇರ್ಲಿಲ್ಲಾ.. ಆದ್ರೆ ಮೊಬೈಲ್ನಲ್ಲಿ ಮೆಸೇಜ್ ಬಂದ್ ತಕ್ಷಣ ಅಚಾನಕ್ಕಾಗಿ ಎಚ್ಚರವಾಗೋಗಿತ್ತು..

ಓಪನ್ ಮಾಡಿ ನೋಡಿದ

neenandre nanage thumbaa ista..

lve u..

ಕಣ್ಣ್ ಉಜ್ಕೊಂಡ್ ಮತ್ತೆ ಸ್ಕ್ರೋಲ್ ಡೌನ್ ಮಾಡಿ ನೋಡಿದ

ನಂಬಕ್ಕಾಗ್ಲಿಲ್ಲ ಅದೇ ನಂಬರ್..

ಮೂರು ವರ್ಷಗಳಿಂದ ಎಷ್ಟು ಟ್ರೈ ಮಾಡಿದ್ರು ಒಂದ್ಸರೀನೂ ಮಾತಾಡಿಸೋದಿರ್ಲಿ ತಿರುಗೀನೂ ನೋಡಿರ್ಲಿಲ್ಲ.. ಅಂತದ್ದು..

ರೀ ಎಲ್ರೀ ನುಗ್ತೀರಾ ಸಿಗ್ನಲ್ ಹಾಕಿರೋದು ಕಾಣಿಸ್ತಿಲ್ವಾ...

ಪಕ್ಕದಲ್ಲಿ ಕಿರಾಚಾಡ್ತಿದ್ದಾನೆ XL ಮೇಲೆ ಹ್ಯಾಂಡಲ್ ಹಿಡ್ಕೊಳ್ಳೋದಿಕ್ಕು ಜಾಗ ಇಲ್ದಂಗೆ ಪೇಪರ್ಸ್ ಬಂಡಲ್ ತುಂಬ್ಕೊಂಡಿರೋ ಪಾರ್ಟಿ...

ಮತ್ತೆ ರಿಂಗಾಯ್ತು 11

ಯಾಕೋ ಇವತ್ತು ಸಿಗ್ನಲ್ಲ್ ತುಂಬಾ ಧೀರ್ಘ ಅನ್ನಿಸ್ತಿತ್ತು ಅವನಿಗೆ..

ಕಾಟನ್ ಪೇಟೆ ಒಳಗಡೆಯಿಂದಾದ್ರು ಬರ್ಬೇಕಿತ್ತು...

ಆಗ್ಲೇ ಅರ್ಧ ಘಂಟೆ ಲೇಟಾಗಿದೆ...

ಪರ್ವಾಗಿಲ್ಲ ಹೆಂಗೋ ಮ್ಯಾನೇಜ್ ಮಾಡೋಣ...

ಎರೆಡು ಐಸ್ಕ್ರೀಮ್ ಎಕ್ಸಟ್ರಾ ಕೊಡಿಸಿದ್ರಾಯ್ತು... ಕೂಲ್ ಆಗ್ತಾಳೆ.

ತಕ್ಷಣ ಎದ್ದು ಕೂತ... ಆ ನಂಬರ್ಗೆ ಡಯಲ್ ಮಾಡ್ದ..

ಆಕಡೆ ರಿಂಗಾಗ್ತಾ ಇದ್ದಾಗ ನೆನಪಾಯ್ತು ನಿನ್ನೆ ಸೌಮ್ಯ ನಾಳೆ ನಿನಗೆ ಸರ್ಪ್ರೈಸ್ ಇದೆ ಅಂತ.. ಅದು ಇದಾ....

ಹಲೋ.. ಆ ಕಡೆ ಮೌನ..

ಮತ್ತೆ ಹಲೋ..

ಮೌನ..

ಮತ್ತೆ ಹ... ಹೆಲೋ ಆಕಡೆಯಿಂದ ಇಂಪಾಗಿ ಕೇಳಿಸಿತ್ತು ರೇಖಾ ಧ್ವನಿ..

ಆ ನಂತರ ಕರೆನ್ಸಿ ಖಾಲಿ ಆಯ್ತೋ ಬ್ಯಾಟರಿ ಖಾಲಿ ಆಯ್ತೋ ಗೊತ್ತಿಲ್ಲ.. ಕಾಲ್ ಕಟ್ ಆಯ್ತು..

1.30 ಗೆ ಅಮರ್ ಹೋಟೆಲ್ ಮುಂದಿರೋ ದೇವಸ್ಥಾನದ ಬಳಿ ಮೀಟ್ ಆಗೋದಂತ ಫಿಕ್ಸ್ ಆಗಿತ್ತು.

ಇವ್ನು ಎದ್ದು ರೆಡಿ ಆದೋವ್ನೆ ಗಾಡಿ ತಗೊಂಡು ಸೀದಾ ಪಿವಿಆರ್ ಗೆ ಹೋಗಿ ಟಿಕೆಟ್ ತಗೊಂಡು ಮತ್ತೆ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರೋಷ್ಟ್ರಲ್ಲಿ ಲೇಟಾಗಿತ್ತು.. ಅದರಲ್ಲಿ ಈ ಟ್ರಾಫಿಕ್ ಜಾಮ್ ಬೇರೆ..

ಹಿಂದೆಯಿಂದ ಒಂದೇ ಸಮನೆ ಬಡ್ಕೊಳ್ತಾ ಇದ್ದ ಹಾರನ್ ಗದ್ದಲ ಸಿಗ್ನಲ್ ಬಿಟ್ಟಿರೋದನ್ನ ಕನ್ಫರ್ಮ್ ಮಾಡ್ತು.

ಗಾಡಿ ಸ್ಟಾರ್ಟ್ ಆಯ್ತು... ಗೇರ್ ಮುಂದಕ್ಕೆ ಒತ್ತಿದ..

ಮತ್ತೆ ರಿಂಗಾಯ್ತು 12

ಛೇ!! ಏನ್ ಹುಡ್ಗೀರಪ್ಪಾ ಗ್ಯಾಪ್ ಇಲ್ದೀರಾ ಮೆಸೇಜ್ ಕಳಿಸ್ತಾರೆ..

ಬಿಎಂಟಿಸಿ ಪಕ್ಕ ಇರೋ ಗ್ಯಾಪಲ್ಲಿ ನುಗ್ಗಿಸಿದ...

ಉಪ್ಪಾರಪೇಟೆ ಪೋಲೀಸ್ ಸ್ಟೇಷನ್ ಕಾರ್ನರ್ ಹತ್ತಿರ ಬರೋಷ್ಟೊತ್ತಿಗೆ,

ಮತ್ತೊಂದು ರಿಂಗ್ 13

ಮುಂದೆ ಸಿಗ್ನಲ್ ಗ್ರೀನ್ ಲೈಟ್ ಇತ್ತು,

ಬೇಗ ಹೋಗ್ಬಿಡೋಣ...

ಓ ಮತ್ತೆ ಸಿಗ್ನಲ್ .. ಮಾಮ ಆಕಡೆ ನೋಡ್ತಿದ್ದಾನೆ

ಸರಿ ಜಂಪ್..

ಮತ್ತೆ ರಿಂಗಾಯ್ತು 14

ಈ ಮೊಬೈಲ್ ಯಾರ್ ಕಂಡು ಹಿಡಿದ್ರೋ ಏನೋ

ನಮ್ ಕಷ್ಟಾನೆ ಅರ್ಥ ಮಾಡ್ಕೊಳ್ಳೋದಿಲ್ಲ ಈ ಹುಡ್ಗೀರು...

ದೇವಸ್ಥಾನದ ಹತ್ತಿರ ಬಂದು ಹೆಲ್ಮೆಟ್ ತೆಗೆದು ಸುತ್ತಲೂ ನೋಡಿದ,

ಎಲ್ಲಿದ್ದಾಳೆ .. ಈ ಗುಡಿ ಹತ್ರಾನೆ ಇರು ಅಂತ ಹೇಳಿದ್ನಲ್ಲಾ ಹೋಗ್ಬಿಟ್ಳಾ

ಮೆಸೇಜ್ ಏನ್ ಕಳಿಸವ್ಳೇ .. ಜೇಬೊಳಗಿಂದ ಮೊಬೈಲ್ ತೆಗೆದ.. ಅದರ ಜೊತೆಗೆ ಬಂದ ಪಿವಿಆರ್ ಟಿಕೆಟ್ಸ್ ಕೆಳಗೆ ಬಿತ್ತು ಬಗ್ಗಿ ಹಾಗೇ ಟಿಕೆಟ್ ಎತ್ಕೊಳ್ತಾ ಮೊಬೈಲ್ ನೋಡಿದ

1.wru

2.wru

3.wru

4.wru

5.wru

6.wru

7.wru

8.wru

9.wru

10.wru

11.wru

12.wru

13.wru

14.wru

:)

ಕೈಯಲ್ಲಿರೋ ವಾಚ್ ನೋಡ್ದ 2.14

ಸುತ್ತಲೂ ನೋಡಿದ ಎಲ್ಲಿದ್ದಾಳೆ ಇವ್ಳು

ಓ ಅಲ್ಲಿ.. (ರಸ್ತೆಯ ಆ ಕಡೆ ಇದ್ಳು)

ಬಾ ..

ನಿಧಾನ..

ಅವ್ಳು ರಸ್ತೆ ದಾಟೋ ಗ್ಯಾಪಲ್ಲಿ ಮತ್ತೆ ಕನಸಿಗೆ ಜಾರಿದ...

ಹಾಗೇ ಮುಂದೆ ಅವಳ ಜೊತೆ ನೈಸ್ ರೋಡ್ನಲ್ಲಿ ಲಾಂಗ್ ಡ್ರೈವ್ ಹೋಗಿ ಹಾಗೇ ಎಲೆಕ್ಟ್ರಾನಿಕ್ ಸಿಟಿಯಿಂದ ಪಿವಿಆರ್ ಗೆ ಎಂಟ್ರಿ ಕೊಡಬೇಕಿತ್ತು..

ಕೈಯಲ್ಲಿ ಒಂದೇ ಟಿಕೆಟ್ !!! ಇನ್ನೊಂದೆಲ್ಲಿ ಓ ಅಲ್ಲಿ ಬಿದ್ದಿದೆ..

ಗಾಡಿಯಲ್ಲಿ ಕುತ್ಕೊಂಡೇ ತಗೊಳ್ಳೋದಿಕ್ಕೆ ಹೋದ..ಹಾಗೇ ಬಲಗಾಲನ್ನು ಬ್ಯಾಲೆನ್ಸ್ ಮಾಡ್ತಾ ಮುಂದಕ್ಕೆ ಸ್ವಲ್ಪ ಸ್ವಲ್ಪಾನೆ ಜರುಗಿಸುತ್ತಾ ಟಿಕೆಟ್ ಎತ್ಕೊಳ್ಲೋದಿಕ್ಕೆ ಕೈ ಮುಂಚಾಚಿದ..

ಬ್ಯಾಲೆನ್ಸ್ ತಪ್ತು.. ಹಾಗೇ ಮುಂದಕ್ಕೆ ಬಿದ್ದ..

ಧಡಾರ್..

ಇನ್ನೋವಾ ಬ್ರೇಕ್ ಹಾಕಿದ ಕಾಲ ಸ್ವಲ್ಪ ತಡವಾಗಿತ್ತು..

ರೋಡ್ ದಾಟಕ್ಕೆ ಬಂದ ರೇಖಾ ರೋಡ್ ಮಧ್ಯ ನಿಂತಲ್ಲೇ ಸ್ತಬ್ದವಾಗಿ ನಿಂತಳು...

ಅವಳ ಕಾಲ ಬಳಿಗೆ ಪಿವಿಆರ್ ಟಿಕೆಟ್ ಹಾರಿಕೊಂಡು ಬಂದು ಬಿತ್ತು.

ಕಣ್ಣು ನೆಲದೆಡೆಗೆ ನೆಟ್ಟಿತ್ತು,

ಅದು ಟಿಕೆಟ್ಟನ್ನು ನೋಡ್ತಾ ಇತ್ತ

ಅಥವಾ......