Monday, September 14, 2009

ಮರೆಯಲಾಗದ ಈದಿನ

ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳವರೆಗೂ ನಾನೇನೊ ಸಾದಿಸಿದ್ದೇನೆ ಎಂಬ ಅಹಮ್ಮಿನಲ್ಲೇ ವಾಸ್ತವದ ತಳಹದಿಯ ಮೇಲೆ ನಡೆದೆ....

ಆ ಅಹಂ ನನಗೆ ತಿರಾ ತಲೆಗೆ ಹತ್ತಿಸಿಕೊಳ್ಳದಿದ್ದರು.. ನನಗೆ ಮಾತ್ರ ಏನೋ ಸಾದಿಸಿದ್ದೇನೆ ಎಂಬ ಭ್ರಮೆಯೊಳಗಿನ ವೃತ್ತದೊಳಗೆ ಓಲಾಡುವಂತೆ ಮಾಡಿತ್ತು...

ಆದರೆ....

ಆ ಹನ್ನೆರುಡು ತಿಂಗಳು ಕೆಲಸವಿಲ್ಲದೆ ಕಳೆದದ್ದು... ಈ ಅಹಂ ತಲೆಯಿಂದ ತಳಬುಡಕ್ಕೆ ಬಂದಿಳಿಯುವಂತೆ ಮಾಡಿತು... ಅಹಂ ಏನೋ ಇಳಿಯಿತು...
ಆದರೆ ಮುಂದೆ...?
ಗೊತ್ತಿಲ್ಲ...
ಇಷ್ಟು ವರ್ಷಗಳಿಂದ ಯಾರ ಮುಂದೆಯೂ ಕೈಚಾಚಿ ಕೆಲಸ ಕೇಳದವನು... ಕೇಳಿದೆ.. ಅಂಗಲಾಚಿದೆ... ಸೋಲುವ ಲಕ್ಷಣಗಳು ಕಣ್ಮುಂದೆ ಕಾಣತೊಡಗಿತು...

ಆದರೂ ಮನದ ಮೂಲೆಯಲ್ಲೆಲ್ಲೋ ಸಣ್ಣ ಆಸೆ... ಮುಂದೆ ಹಿಂದಿನ ಬ್ಯುಸಿ ದಿನಗಳನ್ನು ಪಡೆದೇ ಪಡೆಯುತ್ತೇನೆ ... ಎಂಬ ಸುಳಿವು ಕಾಣುತ್ತಲೇ ಇತ್ತು... ಅಥವ ಆ ಸುಳಿವನ್ನು ಸೃಷ್ಟಿಸಿಕೊಳ್ಳುತ್ತಲೇ ಇದ್ದೆ.....
ಆ ಸುಳಿವೇ
ರಾಬರ್ಟ್ ಬಾಷ್ ಗ್ರಾಂಟ್ ಗೆ ಅರ್ಜಿ ಹಾಕಲು ಪ್ರೇರೇಪಿಸಿತು...ಆ ಪ್ರೇರಣೆಗೆ ಹಿಂದಿನ ದಿನಗಳ ತಯಾರಿ ಜೊತೆಯಾಗಿತ್ತು.... ಗೊತ್ತಿಲ್ಲದ ದೃಡತೆ ಮನದಲ್ಲಿ ಅದಾಗಲೇ ಮೂಡಿತ್ತು... ಆ ಮೂಡಿರುವ ಮೂರ್ತತೆಯೇ ಕಲೆ ಮತ್ತು ಶ್ರೀಸಾಮಾನ್ಯನನ್ನು ಬರೆಯಲು ಪ್ರೇರೇಪಿಸಿತು....ಇದೆಲ್ಲದರ ಪ್ರಬಾವ ಇಂದು ಮೊದಲ ಹಂತ ತಲುಪಿದೆ...


ಇಂದು ನನ್ನ ತಿಳುವಿಗೆ ಮೊದಲ ಗೌರವ ಸಂದಿದೆ...
ಇಂದು ನನ್ನನ್ನು ಗುರುತಿಸಿದ್ದಾರೆ...
ಗುರುತಿಸುವ ಗುಂಪು ಸೃಷ್ಟಿಯಾಗಿದೆ...

ಇಷ್ಟು ದಿನಗಳ ಕಲಿಕೆ , ಅನುಭವಿಸಿದ ಕಷ್ಟಗಳು ಗೊಬ್ಬರವಾಗಿ ಅದರಲ್ಲಿ ಗಿಡ ಮೊಳೆಯಲು ಶುರುವಾಗಿದೆ... ಇದನ್ನು ಇಲ್ಲಿಗೆ ಮುಗಿಯಲು ಬಿಡದೆ... ಗಿಡವಾಗಿಸಿ , ಮರವಾಗಿಸಿ , ಹೆಮ್ಮರವಾಗಿಸಬೇಕಾಗಿದೆ...

ಅದು ಕಲ್ಪಿಸಿಕೊಂಡಷ್ಟು ಸುಲಬವಲ್ಲ ಗೊತ್ತು...
ಹಾಗೇ ಕರಗುವ ಕನಸಿನಂತೆಯೂ ಅಲ್ಲ...
ಕನಸು ಕರಗದಂತೆ ಗಟ್ಟಿಯಾಗಿಸಬೇಕು...

ಮೊದಲ ಮೊಳಕೆ ಗುರುತಿಸುವಂತ ಗಿಡವನ್ನಾಗಿಸಲೇ ಬೇಕು... ಆ ಗಿಡದ ಫಲದಿಂದ ಇನ್ನಷ್ಟು ಗಿಡಗಳನ್ನು ನೆಡಬೇಕು....

ಅದರ ಆರಂಬದ ಈ ದಿನ ಎಂದೂ ಮರೆಯಲಾಗದ್ದು....

1 comment:

  1. ಇದನ್ನು ಇಲ್ಲಿಗೆ ಮುಗಿಯಲು ಬಿಡದೆ... ಗಿಡವಾಗಿಸಿ , ಮರವಾಗಿಸಿ , ಹೆಮ್ಮರವಾಗಿಸಬೇಕಾಗಿದೆ...
    ಗುಡ್‌ಲಕ್
    -ಗಣೇಶ.

    ReplyDelete