Sunday, November 15, 2009

ಕಲೆ ಮತ್ತು ಶ್ರೀ ಸಾಮಾನ್ಯ

ಗುಣಮಟ್ಟವು ಬಹು ಸಂಖ್ಯೆಗೆ ತಲೆಬಾಗದಿರುವುದೇ... ಗಂಬೀರ ಕಲೆಯ ಲಕ್ಷಣ...... ಶ್ರೀ ಸಾಮಾನ್ಯ ಇಂತಹ ಕಲೆಯಿಂದ ಸದಾ ಅಂತರವನ್ನು ಕಾಯ್ದು ಕೊಳ್ಳುತ್ತಾನೆ.... ಕಾರಣ ಈ ಗಂಬೀರ ಕಲೆಯನ್ನು ಮಾಡುವವರು ತುಂಬಾ ಬುದ್ದಿವಂತರೆಂದು...
ಕಲೆ ಮತ್ತು ಶ್ರೀ ಸಾಮಾನ್ಯ.... ಕಲಾವಿಮರ್ಶಕ ಎಚ್ .ಎ. ಅನಿಲ್ ಕುಮಾರ್ ತಮ್ಮ ’ನೋಟ ಪಲ್ಲಟ’ ಪುಸ್ತಕದ ಒಂದು ಲೇಖನದಲ್ಲಿ ಶ್ರಿ ಸಾಮಾನ್ಯನನ್ನು ವಿಶ್ಲೇಶಿಸುವ ಬಗೆ ಇದು.
ಆದರೆ.. ಇವರು ಉದಾಹರಣೆಗೆ ತೆಗೆದು ಕೊಳ್ಳುವ ಶ್ರೀಸಾಮಾನ್ಯ ವಿದ್ಯಾವಂತ,ಸಾಕಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ’ಉಳ್ಳವನು’. ಸಿನಿಮಾಗಳಿಗೆ ಸಂಬಂದಪಟ್ಟ ಹಾಗೆ ನೋಡುವುದಾದರೆ ಗಂಬೀರ ಸಿನಿಮಾಗಳ ಬಹುತೇಕ ಕಥೆಗಳಿಗೆ ಕಥಾವಸ್ತು ಶ್ರಿ ಸಾಮಾನ್ಯ.. ಆದರಲ್ಲಿ ಬಹುತೇಕರು ಅನಕ್ಷರಸ್ಥರು... ಗಿರೀಶ್ ಕಾಸರವಳ್ಳಿ ಅಂತವರ ಬಹುತೇಕ ಸಿನಿಮಾಗಳಲ್ಲಿ ಅನಕ್ಷರಸ್ಥ ಇವರ ಸಿನಿಮಾಗಳ ಮುಖ್ಯ ಪಾತ್ರವಾಗಿರುತ್ತಾನೆ/ಳೆ.

ಆದರೆ ತಮ್ಮ ಕಲಾಕೃತಿಗಳಿಗೆ ಕಥಾ ವಸ್ತುವನ್ನಾಗಿ ಆಯ್ಕೆ ಗೊಳ್ಳುವ ಶ್ರೀಸಾಮಾನ್ಯ ಅವನು ತೆರೆದುಕೊಳ್ಳುವುದು (expose) ಆಗುವುದು... ಯಾರನ್ನು ತಾನು ಬುದ್ದಿವಂತರೆಂದು ದೂರ ಇಟ್ಟಿರುತ್ತಾನೋ ಅದೇ ಸಮಾಜದ ಬುದ್ದಿವಂತರ ಮುಂದೆಯೇ ಹೊರತು. ತಾನು ಪ್ರತಿನಿದಿಸುತ್ತಿರುವ ಸಮಾಜದಲ್ಲಲ್ಲಾ.
ಇಲ್ಲೊಂದು ಕ್ಲೀಷೆ ಈ ಬುದ್ದಿವಂತ ಸಮಾಜದಲ್ಲಿ ಸದಾ ಚಾಲ್ತಿಯಲ್ಲಿದೆ. ಅದು ಏನೆಂದರೆ ಕಲೆನ ಹುಡುಕ್ಕೊಂಡು ಜನ ಬರಬೇಕೆ ಹೊರತು ಜನರನ್ನು ಹುಡುಕಿಕೊಂಡು ಕಲೆಹೋಗಬಾರದು ಅಂತ. ಎಲ್ಲದಕ್ಕೂ ಸದಾ ಪಾಶ್ಚಿಮಾತ್ಯರನ್ನು ಹಿಂಬಾಲಿಸೋ ನಮ್ಮ ಜನರಿಗೆ ಈ ಶ್ರೀಸಾಮಾನ್ಯನ ವಿಷಯದಲ್ಲಿ ಮಾತ್ರ ಪಾಶ್ಚಿಮಾತ್ಯರು ಗಣನೆಗೆ ಬರುವುದಿಲ್ಲಾ... ಕಾರಣ ನಮ್ಮ ಶಿಷ್ಟಬದ್ದ ಸಮಾಜದ ಬುದ್ದಿವಂತ(ಹಾಗೆಂದು ಶ್ರೀಸಾಮಾನ್ಯ ಹೇಳುತ್ತಾನೆ) ಜನರು ತಮ್ಮ ಕಲೆಗಳಲ್ಲಿನ ಶ್ರೀಸಾಮಾನ್ಯನ್ನು ಸಮಾಜದೊಳಗಿನ ಶ್ರೀಸಾಮಾನ್ಯನಿಂದ ಸದಾ ದೂರವಿಟ್ಟಿದ್ದಾರೆ.

ಇದಕ್ಕೆ ಕಾರಣವನ್ನು ಗಂಭೀರಕಲೆಯ ಕಲಾವಿದರು ಮೊದಲಿನಿಂದಲೂ ಕೊಡುತ್ತಲೇ ಇದ್ದಾರೆ. ಅದೇನೆಂದರೆ ಶ್ರೀಸಾಮಾನ್ಯನಿಗೆ ಸದಾ ತನಗೆ ಗೊತ್ತಿರುವ ಪುರಾಣ, ಕಥೆಗಳ ಬಗ್ಗೆ ರಚಿತವಾದ ಕಲಾಕೃತಿಗಳನ್ನಾದರೆ ಹೆಚ್ಚು ಆಸ್ಥೆಯಿಂದ ನೋಡುತ್ತಾನೆ.. ಅದೇ ರವಿಚಂದ್ರನ್ ನ ’ಏಕಾಂಗಿ’ ಸಿನಿಮಾನ ಒಂದೇ ದಿನಕ್ಕೆ ಥಿಯೇಟರ್ನಿಂದ ಹೊರಗೆ ಓಡಿಸುತ್ತಾನೆ.ಇದಕ್ಕೆ ಕಾರಣ ಅವನು ಬುದ್ದಿವಂತನಲ್ಲ.. ಅವನಿಗೆ ತುಂಬಾ ಬುದ್ದಿವಂತಿಕೆಯಿಂದ ಹೇಳಿದರೆ ಅರ್ಥವಾಗುವುದಿಲ್ಲಾ... ನಮಗೆ ಅವನಿಗಿಷ್ಟವಾಗೋ ರೀತಿಯ ಸರಳತೆಯಲ್ಲಿ ಹೇಳುವುದು ಇಷ್ಟವಿಲ್ಲಾ.
ಹಾಗಾದರೆ ಶ್ರೀಸಾಮಾನ್ಯ ಇನ್ನೂ ಪುರಾಣ ಕಥೆಗಳಲ್ಲಿರುವಂತ ನಾಯಕ, ನಾಯಕಿ ಪ್ರದಾನವಾದಂತ ಕಥಾ ಶೈಲಿಯ ಜನಪ್ರಿಯತೆಯ ಮುಖವಾಡದ ಕಲೆಯನ್ನಷ್ಟೇ ಮೆಚ್ಚುತ್ತಾನೆ ಎನ್ನುವುದಾದರೆ ಈ ಜನಪ್ರಿಯ ನಗರ ಕೇಂದ್ರೀಕೃತ ಸಿನಿಮಾಗಳು ಬರುವ ಮೊದಲು ಹಾಗೂ ಐವತ್ತು ಅರವತ್ತರ ದಶಕದನಂತರ ಬಂದ ಸಿನಿಮಾಗಳಲ್ಲಿ ಮುಖ್ಯ ಕಥಾ ನಾಯಕ ಹಳ್ಳಿಯ ರೈತ.. ಅದರಲ್ಲಿಯ ಪಾತ್ರವನ್ನು ಮೆಚ್ಚಿದ್ದಾದರೂ ಏಕೆ....?

ಕಾರಣ ಸ್ಪಷ್ಟ..
ಅಲ್ಲಿಯವರೆಗೂ ಸಿನಿಮಾ ಎಂದರೆ ಸಾರ್ವಜನಿಕ ಸಮಾಜದಿಂದ ಬೇರೆಯದೇ ಪ್ರಪಂಚ. ಅಲ್ಲಿ ಕಥೆಯಾಗಬೇಕಾದರೆ ನಮ್ಮ ಸಾಮಾನ್ಯ ಜನಜೀವನಕ್ಕಿಂತ ವಿಭಿನ್ನವಾದ ಜನಜೀವನವಾಗಬೇಕು ಎಂಬ ಭ್ರಮೆಯಲ್ಲಿದ್ದವನಿಗೆ ತಮ್ಮ ’ಸಾಮಾನ್ಯ’ ಜೀವನವೂ ಕಥೆಯೆಂಬ ಚೌಕಟ್ಟಿನಲ್ಲಿ ನೋಡಿದರೆ”ಅಸಾಮಾನ್ಯ’ ಕಥೆಯಾಗಬಹುದು, ನಮ್ಮ ನಾಎ ಗುರುತಿಸದ ವಿಬಿನ್ನತೆಯನ್ನು ನಾವು ಕಾಣಬಹುದು ಎಂಬುದನ್ನು ಕಂಡುಕೊಂಡನು. ಆಗಿನ ಸಿನಿಮಾಗಳಲ್ಲಿನ ಸ್ಥಳೀಯತೆ (nativity) ಯು ಅವನನ್ನು ಆಕರ್ಶಿಸಿತು... ಆ ಆಕರ್ಶಣೆಯಲ್ಲೇ ಆ ಕಥೆಯೊಳಗಿನ ವಸ್ತುವಿನ ಬಗ್ಗೆ ಚಿಂತಿಸಲು ತೊಡಗಿದನು.
ಶ್ರೀ ಸಾಮಾನ್ಯ ತನ್ನನ್ನು ಪ್ರತಿನಿದಿಸುವ ಕಲೆಯಲ್ಲಿನ ವಸ್ತುವಿನ ಬಗ್ಗೆ ಎಷ್ಟು ಪ್ರಬುದ್ದ ಆಲೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ’ಬಂಗಾರದ ಮನುಷ್ಯ ’ ಸಿನಿಮಾದಿಂದ ಪ್ರಭಾವಿತರಾಗಿ ಈಗಲೂ ಅದೆಶ್ಟೋ ರೈತರು ಬೇಸಾಯವನ್ನೇ ಇಂದಿಗೂ ನೆಚ್ಚಿಕೊಂಡಿದ್ದಾರೆ.

ಇನ್ನು ನಗರದಲ್ಲಿನ ಸಾಮಾನ್ಯ ಜನರು ಪ್ರತಿದಿನ ವ್ಯಯಿಸುವ ಮೂರು ವಿಬಿನ್ನ ಸ್ಥಳಗಳನ್ನು ಎಚ್.ಎ.ಅನಿಲ್ ಕುಮಾರ ರವರು ಗುರುತಿಸುವುದು ತನ್ನ ಮನೆ, ತನ್ನ ಕಚೇರಿ, ಹಾಗೂ ತಾನು ಪ್ರತಿನಿತ್ಯ ಓಡಾಡುವ ರಸ್ತೆಗಳು.
ಸರಿ. ಇವು ಕಚೇರಿಗಳಲ್ಲಿ ಕೆಲಸಮಾಡುವ ಶ್ರೀಸಾಮಾನ್ಯರು ಈ ಮೂರು ಸ್ಥಳಗಳನ್ನು ನಿತ್ಯ ನೋಡುತ್ತಾರೆ.. ಆದರೆ ಅದೇ ಸಮಾಜದಲ್ಲಿ ಮತ್ತೊಂದು ಗುಂಪಿದೆ ಅವರಿಗೆ ತಮ್ಮ ಮನೆ ಬಿಟ್ಟರೆ ಅವರಿಗೆ ಕಾರ್ಯ ನಿರ್ವಹಿಸುವ ಕಚೇರಿ.. ಅವರೇ ಬೀದಿ ಬದಿಯ ವ್ಯಾಪಾರಿಗಳು, ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳು ಇವರಿಗೆ ನಿತ್ಯ ಚಟುವಟಿಕೆ ಹಾಗೂ ವ್ಯಾಪಾರ ವಹಿವಾಟಿನ ಸ್ಥಳಗಳು....

ವರು ತಮ್ಮ ಮನೆಯನು ಹೊರತು ಪಡಿಸಿ ತಮ್ಮ ದಿನದ ಬಹುತೇಕ ಸಮಯವನ್ನು ಕಳೆಯುವುದು ಇಲ್ಲಿಯೇ. ಇಲಿ ಅವರಿಗೆ ರಿಮೋಟ್ ಕೈಯಲ್ಲಿಲ್ಲದಿದ್ದರೂ ಅವರ ಮುಂದೆ ಚಿತ್ರಗಳು ಸದಾ ಚಲಿಸುತ್ತಲೇ ಇರುತ್ತವೆ.ಇವರು ನಿಂತಲ್ಲಿಯೇ ಬೆಳಕಿನ ದಿನ ನಿತ್ಯದ ಮೂರು ಆಯಾಮಗಳನ್ನು ನೋಡುತ್ತಾರೆ.
ಅನಿಲ್ ಕುಮಾರ್ ರವರು ಗುರುತಿಸುವ ಮತ್ತೊಂದು ಅಂಶ ಈ ಸಾಮಾನ್ಯನಿಗೂ ಒಪ್ಪುತ್ತದೆ ಅದೇನೆಂದರೆ ’ಮನೆಯೊಳಗಿನ ಶ್ರೀಸಾಮಾನ್ಯ ಕಲೆಯನ್ನು ಹುಡುಕಿಕೊಂಡು ಹೋಗುವುದಿಲ್ಲಾ... ಅದೇ ಕಲೆ ಟಿವಿ ಮೂಲಕ ತನ್ನ ಬಳಿಗೇ ಬಂದರೆ ರಿಮೋಟ್ ಮೂಲಕ ಅದನ್ನು ಚಿದ್ರಗೊಳಿಸುತ್ತಾ ತನಗೆ ಬೇಕಾದ ಇನ್ನೇನನ್ನೋ ಹುಡುಕುತ್ತಾ ಹೋಗುತ್ತಾನೆ.’ ಅದೇ ರೀತಿಯಲ್ಲಿ ವ್ಯಾಪಾರಿಯೂ ಸಹ ತನ್ನ ಮುಂದೆ ಓಡಾಡುತ್ತಿರುವವರಿಗೆ ತಾನು ಆಕರ್ಶಣೆಯಾಗಿ ಕಂಡರೂ, ಕಾಣದಿದ್ದರೂ ತಾನು ಮಾತ್ರ ಅವರೊಳಗೆ ಇನ್ನೇನನ್ನೋ ಹುಡುಕುತ್ತಾ ಇರುತ್ತಾನೆ/ಳೆ ಹೊರತು ತನ್ನನ್ನು ತಾನು ವಿಶೇಷ ಎಂದು ಗುರುತಿಸಿಕೊಳ್ಳುವುದೇ ಇಲ್ಲಾ... ಹಾಗು ತಾನು ಸಹ ಒಂದು ವಿಷ್ಯಕ್ಕೆ , ಗಂಭೀರ ಚಿಂತನೆಗೆ ವಸ್ತುವಾಗಬಹುದು ಎಂಬ ವಿಷಯ ಅವನು ಅರಿತಿರುವುದಿಲ್ಲ.

ಹಿಂದಿನ ಸೈನ್ ಬೋರ್ಡ್ ಗಳಲ್ಲಿ ಕಾಣುವ ಕುಶಲತೆಯು ಸೆಳೆದಂತೆ ಇಂದಿನ ಡಿಜಿಟಲ್ ಬೋರ್ಡ್ಗಳು ಸೆಳೆಯಲು ವಿಫಲವಾಗುವುದನ್ನು " ಜೀನ್ ಬ್ರೌದಿಲ್ಲಾರ್ಡ್" ಪೊರ್ನೋಗ್ರಫಿಗೆ ಹೋಲಿಸುತ್ತಾನೆ. ಆಸೆ ಹುಟ್ಟಿಸಿ ಪೂರ್ಣತೆಯಭಾವ ದೊರಕಿಸದಿರುವುದು ಬೃಹತ್ ಡಿಜಿಟಲ್ ಜಾಹೀರಾತು ಹಾಗೂ ಫೋರ್ನೋಗ್ರಪಿಯ ಮೂಲಭೂತ ಲಕ್ಷಣ ಎಂದು ಹೇಳುತ್ತಾನೆ.ಆದರೆ ಸ್ವತಃ ಸೈನ್ ಬೋರ್ಡ್ ಕಲಾವಿದನಾದ ನಾನು ಗ್ರಹಿಸಿರುವುದು ಸಾಮಾನ್ಯನ ದೃಷ್ಟಿಕೋನದಲ್ಲಿ .. ಚಿತ್ರಕಲೆಯಲ್ಲಿ ಶ್ರೀಸಾಮಾನ್ಯ ಎಷ್ಟೇ ನೈಜತೆಯನ್ನು , ಕುಶಲತೆಯನ್ನು ಗ್ರಹಿಸಿದರು, ಅನುಭವಿಸಿದರು. ಅವನಿಗೆ ಡಿಜಿಟಲ್ ಕೃತಿ ಕೊಟ್ಟಷ್ಟು ಪೂರ್ಣತೆ ಬಣ್ಣದಿಂದ ರಚಿತ ಕೃತಿ ನೀಡುವುದಿಲ್ಲಾ.

ಶ್ರೀ ಸಾಮಾನ್ಯ ತನ್ನ ದಿನ ನಿತ್ಯ್ದ ಚಟುವಟಿಕೆ ಸ್ಥಳಗಳಲ್ಲಿ ತನ್ನ ಚಿತ್ರ ಮುಖ್ಯವಾಹಿನಿಯಾಗಿ ದೊಡ್ಡ ಜಾಹಿರಾತಿನಲ್ಲಿ ಕಂಡುಕೊಂಡರೆ ತನ್ನನ್ನು ತಾನು ಅದೇ ಬೋರ್ಡಿನಲ್ಲಿ ಈ ಹಿಂದೆ ಇದ್ದ , ಉಪೇಂದ್ರ ನ ಅಥವ ದರ್ಶನ್ ನ ಸಮಕ್ಕೆ ಊಹಿಸಿಕೊಳ್ಳುತ್ತಾನೆ. ಇದನು ರಚಿತ ಕಲೆ ಅವನಿಗೆ ನೀಡುವುದಿಲ್ಲಾ.


1 comment:

  1. ಶ್ರೀ ಸಾಮಾನ್ಯನ ದಿನಚರಿ ಹಾಗು ರಸ್ತೆ ಬದಿಯ ವ್ಯಾಪಾರ
    ಸಹಜವಾಗಿ ಮೂಡಿ ಬಂದಿದೆ.

    ReplyDelete