tag:blogger.com,1999:blog-9086033964675919633.post1069514468988232537..comments2015-04-30T03:12:57.786-07:00Comments on ಮಂಸೋರೆ: ಸಾವಿನೆಡೆಗೊಮ್ಮೆ ಮುಖ ಮಾಡುವುದು ಹೇಡಿತನವಾ?ಮಂಸೋರೆhttp://www.blogger.com/profile/09491385921591775322noreply@blogger.comBlogger3125tag:blogger.com,1999:blog-9086033964675919633.post-9396947180005708932013-01-27T00:11:32.452-08:002013-01-27T00:11:32.452-08:00ಸಾವು ಅಂದರೇನು ? ಜನ್ಮ ಅಂದರೇನು ? ನಿಜವಾಗಿಯು ನೀನು ಹುಟ್ಟ...ಸಾವು ಅಂದರೇನು ? ಜನ್ಮ ಅಂದರೇನು ? ನಿಜವಾಗಿಯು ನೀನು ಹುಟ್ಟಿರುವೆಯಾ? ನೀನು ಹುಟ್ಟುವಾಗ ಇದೇ ರೀತಿ ಯೋಚನೆ ಮಾಡಿಕೊಂಡು ಭೂಮಿಗೆ ಬಂದದ್ದು. ಸಾವಿಗೆ ಗೊತ್ತು ನಿನ್ನನ್ನು ಯಾವಾಗ ? ಹೆಂಗೆ ? ಎಲ್ಲಿ ? ಎಷ್ಟು ಹೊತ್ತಿಗೆ ? ಯಾರ ಮುಂದೆ ಸಾಯಿಸಬೇಕು ಅಂತಾ . ಸಮಾಧಾನದಿಂದ ಬದುಕುವುದು ಕಲೆತರೆ.. ಸಮಾಧಾನದಿಂದ ಸಾಯೋದು ಕಲಿಯಬಹುದು...<br />ಆದರು ಸಾಯುವ ಕಲೆಯನ್ನು ಅರಿತಿದ್ದರೆ ಒಳ್ಳ್ಳೆಯದು.. <br />http://www.summum.us/mummification/tbotd/Discover Kaverihttps://www.blogger.com/profile/04102007982333553610noreply@blogger.comtag:blogger.com,1999:blog-9086033964675919633.post-25263022993044749782013-01-25T02:34:47.665-08:002013-01-25T02:34:47.665-08:00I don't know how I should I read this post of ...I don't know how I should I read this post of yours, Let me read it straight!<br />ಸಾವಿನೆಡೆಗೆ ಮುಖ ಮಾಡುವುದು ಹೇಡಿತನವಲ್ಲ. ಅದು ಸಮಸ್ಯೆಯ ಅನೇಕ ಪರಿಹಾರಗಳಲ್ಲೊಂದು ಪರ್ಯಾಯವಷ್ಟೇ. ಪ್ರತಿಯೊಬ್ಬರೂ ಯಾವುದೋ ಒಂದು ಸಂದರ್ಭದಲ್ಲಿ ಆ ಮಾರ್ಗವನ್ನು ಯೋಚಿಸಿರುತ್ತಾರೆ. ಆದರೆ ಆ ಆಲಿಂಗನಕ್ಕಾಗಿರುವ ತುಡಿತದ ತೀವ್ರತೆಯಲ್ಲಿ ವ್ಯತ್ಯಾಸವಾಗಿರುತ್ತದೆ. ಆದರೂ ಬಹುತೇಕರು ಆ ಪರ್ಯಾಯದ ಮೊರೆ ಹೋಗುವುದಿಲ್ಲ. ಅದುವೇ ಜೀವನ! ನನ್ನ ಅಗಲುವಿಕೆಯಿಂದ ಪ್ರಪಂಚದಲ್ಲಾಗುವ ವ್ಯತ್ಯಾಸವೇನೂ ಇಲ್ಲ ಎಂಬ ಭಾವನೆಯ ಜೊತೆಗೆ, ಸಮಸ್ಯೆಗಳಿಗೆಲ್ಲ ಶಾಶ್ವತ ಪರಿಹಾರದ ಸಂತೋಷ ಎಷ್ಟರ ಮಟ್ಟಿಗೆ ಸಾವಿನೆಡೆಗೆ ಸೆಳೆಯುತ್ತದೆಂದರೆ ಸಾವಿನ ನಂತರದ ಸುಖದ ಸುಪ್ಪತ್ತಿಗೆಯ ಭ್ರಮೆಯೇ ನಿಜವೆನಿಸಿಬಿಡುತ್ತದೆ. ಇದು ಲೌಕಿಕ ಮಾತ್ರ ಎಂದು ಬದುಕನ್ನು ತಿರಸ್ಕರಿಸುವ ಪಾರಮಾರ್ಥಿಕ ವೇದಾಂತಿಗಳಾಗಿಬಿಡುತ್ತೇವೆ, ಏಕಾಏಕಿ! <br />ಆದರೆ, ಈ ಪರ್ಯಾಯದ ವಿಪರ್ಯಾಸವೆಂದರೆ, ಇದರ ಅಂತ್ಯವನ್ನು ತಿರುಗಿಸಲು ಸಾಧ್ಯವಿಲ್ಲ. ಛೇ! ನಾನಿದ್ದಿದ್ದರೆ ಹೀಗೆ ಮಾಡಬಹುದಾಗಿತ್ತು ಎನ್ನುವುದಕ್ಕೂ ನಾವಿರುವುದಿಲ್ಲ. Its an irreversible process! ಬಹುಶ: ಆ ಕಾರಣಕ್ಕಾಗಿಯೇ ಸಾವು ಎನ್ನುವ ಅನುಭವ ಅತ್ಯಂತ ಆಕರ್ಷಣೀಯವಾಗಿ ಕಂಡರೂ ನಾವಾಗಿ ಬೆನ್ನತ್ತಿ ಹೋಗದೆ, ಅದರ ಆಗಮನಕ್ಕಾಗಿ ಕಾಯುವುದರಲ್ಲೇ ಸುಖವಿದೆ ಎಂದೆನಿಸುತ್ತದೆ. ಆಗಮಾತ್ರ ಅದನ್ನು ಸಂಪೂರ್ಣವಾಗಿ ಅನುಭವಿಸಬಹದು!<br /><br />ನಮ್ಮ ಅಗಲಿಕೆಯಿಂದ ನಂಬಿದವರಿಗೆ ತೊಂದರೆಯಾಗದಿದ್ದರೂ, ನಮ್ಮ ಹೊರತಾಗಿ ಇರುವುದು ಕಾಲಕ್ರಮೇಣ ಅಭ್ಯಾಸವಾದರೂ, ಕಣ್ಣೀರು ಬತ್ತಿಹೋದರೂ ನಮ್ಮ ಆಪ್ತ ವಲಯದಲ್ಲಿ ನಾವೊಂದು ಶೂನ್ಯವನ್ನು ಸೃಷ್ಟಿಸಿ ಬಿಟ್ಟಿರುತ್ತೇವೆ. ಅಂಥದೊಂದು ಖಾಲಿತನದೊಂದಿಗೆ ಬದುಕುವ ಹಿಂಸೆ, ಆ ನಿರ್ವಾತಕ್ಕೆ ತಮ್ಮನ್ನೇ ಹೊಣೆಯಾಗಿಸಿಕೊಳ್ಳುತ್ತ ಸ್ವತ: ಅಪರಾಧಿಗಳಾವುದು, ಬೆನ್ನಹಿಂದಾಡಿಕೊಳ್ಳುವ ಸಮಾಜಕ್ಕೆ ಬೆನ್ನು ತೋರಿಸುವ ಪ್ರಯತ್ನದ ಮೂರ್ಖತನ..... ಬಹುಶ: ಅಂತಹ ಸಾವಲ್ಲದ ಸಾವಿನ ಮನೆಯವರಿಂದ ಯಾವ ಧೈರ್ಯಸ್ಥನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ!!!<br /><br />ನಿಮ್ಮ ಬ್ಲಾಗಿನ background ಸೂಪರ್ರಾಗಿದೆ!! ನಿಮ್ಮದೇ painting ಅಂದುಕೊಳ್ತೀನಿ :)ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-9086033964675919633.post-8277170120652051242013-01-24T07:54:57.521-08:002013-01-24T07:54:57.521-08:00ಮಂಸೋರೆ,
ನಿಮ್ಮಾರ್ಟಿಕಲ್ ಓದುತ್ತಾ ನನಗೆ ರೈನರ್ ಮಾರಿಯಾ ರಿ...ಮಂಸೋರೆ,<br />ನಿಮ್ಮಾರ್ಟಿಕಲ್ ಓದುತ್ತಾ ನನಗೆ ರೈನರ್ ಮಾರಿಯಾ ರಿಲ್ಕ್ "ಯುವ ಕವಿಗೆ ಬರೆದ ಪತ್ರಗಳು" ಪುಸ್ತಕದ ಒಂದು ಸಾಲು ನೆನಪಾಯ್ತು... "ನಿನ್ನ ದಿನನಿತ್ಯದ ಬದುಕು ರಿಕ್ತವಾದದ್ದು ಎನಿಸಿದರೆ ಬದುಕನ್ನು ನಿಂದಿಸಬೇಡ, ನಿನ್ನನ್ನೇ ನಿಂದಿಸಿಕೋ.... ಬದುಕಿನ ಶ್ರೀಮಂತಿಕೆಯನ್ನು ಕಾಣಲಾರದ ನಿನ್ನ ರಿಕ್ತತೆಯನ್ನು ನಿಂದಿಸಿಕೋ...!"<br /><br />ನನ್ನಾಲೋಚನೆಯಲ್ಲಿ ಸಾವೆಂಬುದು ಒಂದು ಅದ್ಬುತವಾದ ಕ್ಷಣ!ಒಂದೇ ಸಲ ಅನುಭವಿಸೋಕೆ ಸಾಧ್ಯವಾಗುವಂತಹ ಕ್ಷಣ. ಅದು ಕರೆದಾಗ ಹೋದರೆ ಮಾತ್ರ ಅದರ ಅದ್ಭುತತೆಯ ಅನುಭವವಾಗೋದು ಅಂತ ನನ್ನಸಿಕೆ! ಕರೆಯದಲೇ ಹೋಗುವುದು ಯಾವ ಕಾಲಕ್ಕೂ ಸಮ್ಮತವಲ್ಲ!!<br />ಸವಿತ ಎಸ್ ಆರ್Savitha SRhttps://www.blogger.com/profile/11638926200101844183noreply@blogger.com